ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ: ಕೃಷಿ, ತೋಟಕ್ಕೆ ತಡೆ ಇಲ್ಲ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕ, ಕೇರಳ ಸೇರಿದಂತೆ ಆರು ರಾಜ್ಯಗಳಲ್ಲಿ ಮೈಚಾಚಿರುವ ಪಶ್ಚಿಮಘಟ್ಟದಲ್ಲಿ ತೋಟ­­ಗಾರಿಕೆ (ಪ್ಲ್ಯಾಂಟೇಷನ್) ಹಾಗೂ ಕೃಷಿ ಚಟುವಟಿಕೆಗಳಿಗೆ ಹೇರಿದ್ದ ನಿರ್ಬಂಧವನ್ನು ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ವಾಪಸ್‌ ತೆಗೆದುಕೊಂಡಿದೆ.

ಡಾ.ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿಯ ಬಹುತೇಕ ಶಿಫಾರಸುಗಳನ್ನು ಒಪ್ಪಿಕೊಂಡಿದ್ದ ಸಚಿವಾಲಯವು,  ಘಟ್ಟ
ಪ್ರ­ದೇಶ­ದಲ್ಲಿ ಅಡಿಕೆ, ಕಾಫಿ, ತೆಂಗು, ಚಹಾ, ರಬ್ಬರ್‌ ಮತ್ತಿತರ ತೋಟ­ಗಾರಿಕೆ, ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಕೇರಳ ಹಾಗೂ ಕರ್ನಾಟಕದ ಕೆಲವು ಕಡೆ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. 

ನಿರ್ಬಂಧಕ್ಕೆ ಅಡ್ಡಿ ಇಲ್ಲ: ಪಶ್ಚಿಮ­ಘಟ್ಟ­ದಲ್ಲಿ  ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್‌ ಸ್ಥಾವರ ಹಾಗೂ ಮಾಲಿನ್ಯ ಉಂಟುಮಾಡುವ ಉದ್ಯಮ­  ಸ್ಥಾಪನೆ ಮತ್ತು 20 ಸಾವಿರಕ್ಕಿಂತ ಹೆಚ್ಚು ಚ.ಮೀಟರ್‌ ಜಾಗ­ದಲ್ಲಿ ಕಟ್ಟಡ ಮತ್ತಿತರ ನಿರ್ಮಾಣ ಯೋಜ­ನೆಗಳು, 50 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ವಸತಿ ಹಾಗೂ ಅಭಿ­­ವೃದ್ಧಿ ಯೋಜನೆ ಕೈಗೊಳ್ಳು­ವುದಕ್ಕೆ ಈಗಿರುವ ನಿರ್ಬಂಧ ಮುಂದು­ವರಿಯುತ್ತದೆ.

‘ಸೂಕ್ಷ್ಮ ಪರಿಸರ’ ಪ್ರದೇಶದಲ್ಲಿನ ಜಮೀನು ಬಳಸಿ­­­ಕೊ­­ಳ್ಳುವುದಕ್ಕೆ ಹೊಸದಾಗಿ ನಿರ್ಬಂಧ ಹೇರಿಲ್ಲ. ಅಲ್ಲದೇ ಜನವಸತಿ ಪ್ರದೇಶಕ್ಕೂ ಯಾವುದೇ ಧಕ್ಕೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT