ಇಸ್ಲಾಮಾಬಾದ್ / ಲಾಹೋರ್ (ಪಿಟಿಐ): ಮುಂಬೈ ದಾಳಿ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಸಲು ಬುಧವಾರ (ಸೆ.11) ಭಾರತಕ್ಕೆ ತೆರಳಬೇಕಿದ್ದ ಪಾಕ್ ನ್ಯಾಯಾಂಗ ಆಯೋಗದ ಮಹತ್ವದ ಭೇಟಿಯು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕನಿಷ್ಠ 10 ದಿನಕ್ಕೆ ಮುಂದಕ್ಕೆ ಹೋಗಿದೆ.
‘ಗಣೇಶ ಹಬ್ಬದ ಪ್ರಯುಕ್ತ ಮುಂಬೈನಲಿ್ಲ ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಈಗ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಆಗದು ಎಂದು ಭಾರತ ಸರ್ಕಾರ ತಿಳಿಸಿದ್ದು, ಭೇಟಿಯನು್ನ ಮುಂದೂಡುವಂತೆ ಸೂಚಿಸಿದೆ’ ಎಂದು ಆರೋಪಿಗಳ ಪರ ವಕೀಲ ರಿಯಾಜ್ ಅಕ್ರಮ್ ಚೀಮಾ ತಿಳಿಸಿದಾ್ದರೆ.
ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆ ವೇಳೆ ರಿಯಾಜ್ ಈ ವಿಷಯವನು್ನ ಕೋರ್ಟ್ನಲಿ್ಲ ತಿಳಿಸಿದರು.
ನಾ್ಯಯಾಂಗದ ಮುಂದಿನ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬಹುಶಃ ಇನ್ನೊಂದು ವಾರದಲಿ್ಲ ಹೊಸ ದಿನಾಂಕ ನಿಗದಿಯಾಗಬಹುದು ಎನ್ನಲಾಗಿದೆ.
ಆಯೋಗದ ಭಾರತ ಭೇಟಿಯು ಈ ತಿಂಗಳಲಿ್ಲ ಎರಡು ಸಲ ಮುಂದೂಡಿಕೆಯಾದಂತೆ ಆಗಿದೆ. ಭಾರತವು ಈ ಮುಂಚೆ ನೀಡಿದ್ದ ದಿನಾಂಕದ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲೇ ಆಯೋಗದ ಸದಸ್ಯರು ಅಲಿ್ಲಗೆ ತೆರಳಬೇಕಿತ್ತು. ಆದರೆ ಅಂತರರಾಷ್ಟ್ರೀಯ ವಿಮಾನದ ರದ್ದತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಸೆ.7ರಂದು ಭೇಟಿ ನಿಗದಿಯಾಗಿತ್ತು. ಅಂದು ಪುನಃ ವಿಮಾನ ರದಾ್ದಗಿದ್ದರಿಂದ ಭೇಟಿಯು ರದಾ್ದಗಿತ್ತು.