ಕೇಂದ್ರ ಗೃಹ ಸಚಿವಾ ಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ನಾಲ್ವರು ಸದಸ್ಯರ ತಂಡದಲ್ಲಿ ಅಜ್ಮಲ್ ಕಸಾಬ್ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಿದ ಅಭಿ ಯೋಜಕ ಉಜ್ವಲ್ ನಿಕ್ಕಂ ಕೂಡಾ ಒಬ್ಬರಾಗಿದ್ದಾರೆ. ಗೃಹ ಮತ್ತು ವಿದೇ ಶಾಂಗ ಸಚಿವಾಲಯದ ಕಾನೂನು ಪರಿಣತರ ತಂಡ ಬುಧವಾರ ರಾತ್ರಿಯೇ ಇಲ್ಲಿಗೆ ಆಗಮಿಸಿದ್ದು ಈಗಾಗಲೇ ಮಾತು ಕತೆ ಆರಂಭಿಸಿದೆ. ಅಟಾರ್ನಿ ಜನರಲ್ ಇರ್ಫಾನ್ ಖಾದಿರ್ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಎರಡು ದಿನ ಚರ್ಚೆ ನಡೆಸಲಿರುವ ತಂಡ, ವಿಚಾ ರಣೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯ ಗಳನ್ನು ಅಂತಿಮಗೊಳಿಸಲಿದೆ.