ಭ್ರಷ್ಟಾಚಾರ, ಅನ್ಯಾಯ, ಅಕ್ರಮ ವ್ಯವಹಾರಗಳಿಗೆ ಹೆಸರಾಗಿದ್ದ ಕರ್ನಾಟಕದ ಬಿ.ಜೆ.ಪಿ. ಸರ್ಕಾರ ಈಗ ಅನೈತಿಕತೆಗೂ ಅವಕಾಶ ಮಾಡಿಕೊಟ್ಟಿದೆ. ಎಲ್ಲ ಅಕ್ರಮಗಳನ್ನೂ ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರು ಈ ರಾಜ್ಯವನ್ನು ನಾಶ ಮಾಡುವವರೆಗೆ ವಿರಮಿಸುವುದಿಲ್ಲ. ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಅಕ್ರಮ, ಅನೈತಿಕ ವ್ಯವಹಾರದಲ್ಲಿ ಭಾಗಿಯಾದವರು, ಅವರನ್ನು ಬೆಂಬಲಿಸಿದವರು ಮತ್ತು ಅದನ್ನು ಸಮರ್ಥನೆ ಮಾಡಿಕೊಂಡವರನ್ನು ಮತದಾರರೇ ಶಿಕ್ಷಿಸಬೇಕು. ಇಲ್ಲವಾದರೆ ಈ ರಾಜ್ಯಕ್ಕೆ ಉಳಿಗಾಲವಿಲ್ಲ.