ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ರಸ್ತೆಯಲ್ಲಿರುವ ಕಟ್ಟೆ ತೆಗೆಯಲು ಮನವಿ

ಅಕ್ಷರ ಗಾತ್ರ

ಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರ ವಾರ್ಡ್‌ಗೆ ಸೇರಿದ ನೆಹರೂ ರಸ್ತೆಯ ಅದೇ ಹೆಸರಿನ ವೃತ್ತದ ಆಟೊ ನಿಲ್ದಾಣದ ಬಳಿ ಮೂಲೆಯ ಖಾಲಿ ನಿವೇಶನಕ್ಕೆ ಹೊಂದಿಕೊಂಡಂತೆ ಕಟ್ಟೆಯೊಂದು ಇದ್ದು, ರಸ್ತೆಯಲ್ಲಿ ಸಂಚರಿಸುವ ದಾರಿಹೋಕರು ಈ ಕಟ್ಟೆ ಏರಿ ಮೂಲೆಯ ಖಾಲಿ ನಿವೇಶನದಲ್ಲಿ  ಮಲ–ಮೂತ್ರಗಳನ್ನು ವಿಸರ್ಜಿಸಿರುತ್ತಾರೆ.

ಇದರಿಂದ ಈ ರಸ್ತೆಯಲ್ಲಿ ವಾಸನೆ ಹೆಚ್ಚಾಗಿದ್ದು, ಸೊಳ್ಳೆಗಳ ತವರು ಇದಾಗಿದೆ. ದಯವಿಟ್ಟು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, ನಗರಸಭಾ ಸದಸ್ಯರು ಈ ವೃತ್ತಕ್ಕೆ ಭೇಟಿ ನೀಡಿ, ಈ ಕಟ್ಟೆಯಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
–ಗಿರಿನಗರ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT