ಈ ಸಂದರ್ಭದಲ್ಲಿ ನನ್ನ ದೌರ್ಬಲ್ಯ ಎಂದರೆ ನಾನು ಹಲವು ಅನುದಾನಗಳನ್ನು ಕೆಲಸ ಮಾಡಿದ್ದರೂ ಸದ್ಯದ ನನ್ನ ಎದುರಾಳಿಗಳು ಹಣದಲ್ಲಿ ಬಲಾಢ್ಯ ರಾಗಿದ್ದು ಕೊನೆ ಹಂತದಲ್ಲಿ ಜನರನ್ನು ಹಣದಿಂದ ಬದಲಾವಣೆ ಮಾಡುವ ಉದ್ದೇಶದಿಂದ ಇದ್ದಾರೆ. ಈ ರೀತಿಯ ಧೈರ್ಯದಿಂದಾಗಿ ನಾನು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರೂ ಅವರು ಮನೆಯಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಇಲ್ಲವೇ ಇಲ್ಲ. ಕೆಜೆಪಿ ಮತ್ತು ಕಾಂಗ್ರೆಸ್ ವೀರಶೈವ ಸಮುದಾಯದ ಮತಗಳನ್ನೇ ನೆಚ್ಚಿಕೂತಿವೆ ಎಂದರು.
`ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ ಸ್ವಾಗತಾರ್ಹ. ಇದರಿಂದ ಒಳ್ಳೆಯದೇ ಆಗಿದೆ. ಚೆಕ್ಬೌನ್ಸ್ ಪ್ರಕರಣ ತೀರಾ ಖಾಸಗಿ ವಿಚಾರ. ಅದನ್ನು ಪ್ರಕಟ ಮಾಡ ಬೇಕಾದ ಪ್ರಮೇಯವೂ ಇರಲಿ ಎಂದರು. ಸಭೆಯಲ್ಲಿ ಹಿರೇನಲ್ಲೂರು ಶಿವು ಜೆಡಿಎಸ್ ಸೇರ್ಪಡೆಗೊಂಡರು. ಕಂಸಾಗರ ರೇವಣ್ಣ, ಗಂಗಾಧರ ನಾಯ್ಕ, ಮಂಜುನಾಥ ಪ್ರಸನ್ನ, ಸತೀಶನಾಯ್ಕ, ಪಾತೇನಹಳ್ಳಿ ಚೌಡಪ್ಪ ಮುಂತಾದವರು ಇದ್ದರು.