ಗದಗ: ಬಡವರಿಗೆ ಅರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ಸರಕಾರದ ಯೋಜನೆಗಳಲ್ಲಿ ಒಂದಾದ ಪಿಂಚಣಿ ಅದಾಲತ್ ಕಾಯರ್ಕ್ರಮವನ್ನು ಹೋಬಳಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬೆಟಗೇರಿಯ ಮನ್ನುಬಾಯಿ ಖೋಡೆ ಕಲ್ಯಾಣ ಮಂಟಪದಲ್ಲಿ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಬೆಟಗೇರಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾದ ಸದಾಶಯದಂತೆ ಯೋಜನೆಗಳು ಬಡವರ ಮನೆಗೆ ತಲುಪಬೇಕು ಆದರೆ ಆಡಳಿತ ದೋಷದಿಂದ ಅರ್ಹ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಇದರಿಂದ ಇಂದಿಗೂ ಸರಕಾರಿ ಕಚೇರಿಯಲ್ಲಿ ಪಿಂಚಣಿ ಪಡೆಯಲು ದಿನವಿಡಿ ಸಾಲುಗಟ್ಟಿ ನಿಂತಿರುತ್ತಾರೆ ವಿಷಾದಿಸಿದರು.
ಆಡಳಿತ ಯಂತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ದಲ್ಲಾಳಿಗಳನ್ನು ದೂರವಿರಿಸಿ ಅರ್ಹ ಫಲಾನುಭವಿಗಳಿಗೆ ಶೋಷಣೆ ಮಾಡದೆ ಬಡವರ ಮನೆಗಳಿಗೆ ಪಿಂಚಣಿ ಮುಟ್ಟಿಸುವ ಕೆಲಸವವನ್ನು ಸರ್ಕಾರ ಪಿಂಚಣಿ ಆದಾಲತ್ ಮೂಲಕ ಮಾಡುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳ ವಿರುದ್ಧ ಧ್ವನಿ ಎತ್ತು ಮೂಲಕ ವಿರೋಧ ಪಕ್ಷದವರು ಬಡವರ ಬಗ್ಗೆ ಇರುವ ತಾತ್ಸಾರ ಭಾವನೆ ತೋರಿಸುತ್ತಿದ್ದಾರೆ. ಹಿಂದಳಿದ ವರ್ಗಗಗಳ ನಿಗಮ, ಅಲ್ಪ ಸಂಖ್ಯಾತರ ನಿಗಮಗಳಲ್ಲಿನ ಸಾಲವನ್ನು ಮನ್ನಾ ಮಾಡಿದ ಸರಕಾರ ಬಡವರ ನೋವುಗಳಿಗೆ ಸ್ಪಂದಿಸುತ್ತದೆ ಎಂದರು.
ದೇಶದ ಬಡತನ ನಿರ್ಮೂಲನೆ ಮಾಡಲು ಕೇಂದ್ರ ಸರಕಾರವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾಲ್ಲೂಕಿನಾದ್ಯಂತ ಅರ್ಹ ಫಲಾನುಭವುಗಳನ್ನು ಗುರುತಿಸಿ ಪಿಂಚಣಿ ಆದೇಶ ಪತ್ರವನ್ನು ವಿತರಿಸಲು ಉಪವಿಭಾಗಧಿಕಾರಿಗೆ ಆದೇಶಿಸಿದರು. ಪಿಂಚಣಿ ಅದಾಲತ್ನಲ್ಲಿ ವೃದಾ್ಧಪ್ಯ ವೇತನ, ಅಂಗವಿಕಲರ ಮಾಸಾಶನ, ವಿಧವಾ ವೇತನ, ಆದರ್ಶವಿವಾಹ ಯೋಜನೆಗೆ ಸಂಬಂಧಿಸಿದ ನೂರಾರು ಅರ್ಜಿಗಳನ್ನು ಸ್ವೀಕರಿಸಿಲಾಯಿತು. ಕೆಪಿಸಿಸಿ ಸದಸ್ಯ ವಾಸಣ್ಣ ಕುರುಡಗಿ, ನಗರಸಭೆ ಸದಸ್ಯರುಗಳಾದ ಎಲ್.ಡಿ. ಚಂದಾವರಿ. ಸುರೇಶ ಕಟ್ಟಿಮನಿ, ಪನ್ನಾಬಾಯಿ ಬಾಗಡೆ, ಮಂಜುನಾಥ ಮುಳಗುಂದ ಹಾಜರಿದ್ದರು.