ಅಧಿಕಾರಿಗಳ ಮೇಲೆ ಕೈಮಾಡುವ ಮತ್ತು ಕಿರುಕುಳ ನೀಡುವ ಪ್ರಕರಣ ಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ಹಲವು ಸುತ್ತಿನ ಮಾತುಕತೆ ನಂತರ ಪಿಡಿಒಗಳು ಸಾಮೂಹಿಕ ರಾಜೀ ನಾಮೆಯಿಂದ ಹಿಂದೆ ಸರಿದಿದ್ದಾರೆ. ಕಿರುಕುಳ ನೀಡಿದ ವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಇದರ ಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಪಂಚಾ ಯಿತಿಗಳ ಸಿಇಒ ಮತ್ತು ತಾಲ್ಲೂಕು ಪಂಚಾಯಿತಿಗಳ ಇಒ ಗಳಿಗೆ ವಹಿಸ ಲಾಗಿದೆ ಎಂದು ಅವರು ಹೇಳಿದರು.