ಬೆಂಗಳೂರು – ಮೈಸೂರು ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ಕೆಂಗೇರಿ – ಮೆಜೆಸ್ಟಿಕ್ ನಡುವೆ ಬೋಗಿಗಳ ಕಿಟಕಿಗಳನ್ನು ಮುಚ್ಚಿಯೇ ಪ್ರಯಾಣಿಸುವ ಅನಿವಾರ್ಯ ಪರಿಸ್ಥಿತಿ ಇಂದಿನ ದಿನಗಳಲ್ಲಿದೆ.
ಈ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು, ಚಲಿಸುವ ರೈಲಿಗೆ ಕಲ್ಲುಗಳನ್ನೆಸೆದು ಆತಂಕ ಸೃಷ್ಟಿಸುತ್ತಿದ್ದಾರೆ. ಈ ತಿಂಗಳ 12 ರಂದು ಯಶವಂತಪುರ – ಕಾರವಾರ ರೈಲಿಗೆ ಕಲ್ಲುಗಳನ್ನೆಸೆದು ಭಯದ ವಾತಾವರಣವನ್ನು ಸೃಷ್ಟಿಸಲಾಗಿತ್ತು.
ಪರಿಣಾಮವಾಗಿ ಆ ದಿನ ರೈಲು ಕೆಲ ಕಾಲ ವಿಳಂಬವಾಗಿ ಚಲಿಸುವಂತೆ ಆಯಿತು. ಈ ದುಷ್ಟಪ್ರವೃತ್ತಿ ಕೆಲವು ವರ್ಷಗಳಿಂದಲೇ ನಡೆದು ಬರುತ್ತಿದೆ. ಇದನ್ನು ಮಟ್ಟಹಾಕುವವರು ಯಾರೂ ಇಲ್ಲವೇ?