ನವದೆಹಲಿ (ಪಿಟಿಐ): ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾದ ಪುಣೆ ವಾರಿಯರ್ಸ್ ತನ್ನಲ್ಲಿಯೇ ಉಳಿಸಿಕೊಂಡಿದೆ.
ಐಪಿಎಲ್ ನಾಲ್ಕನೇ ಅವತರಣಿಕೆಯ ಸಂದರ್ಭದಲ್ಲಿ ಗಾಯಾಳು ಆಟಗಾರರ ಬದಲಿಗೆ `ದಾದಾ~ ಖ್ಯಾತಿಯ ಪಶ್ಚಿಮ ಬಂಗಾಳದ ಕ್ರಿಕೆಟಿಗ ವಾರಿಯರ್ಸ್ ತಂಡವನ್ನು ಪ್ರವೇಶ ಮಾಡಿದ್ದರು. ಐದನೇ ಅವತರಣಿಕೆಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಪೂರ್ವದಲ್ಲಿಯೇ ಗಂಗೂಲಿಯನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ವಾರಿಯರ್ಸ್ ತಂಡ ಕೈಗೊಂಡಿದೆ.