<p><strong>ಚಂದಪದ್ಯ</strong></p>.<p>ತಂಬೂರಿಯನು ಮೀಟಿ<br /> ಜಂಗದ ಜಂಜಡ ದಾಟಿ<br /> ಹೋದ ಹೋದನಾ ದಾಸ<br /> ಅವನೇ ಪುರಂದರದಾಸ!</p>.<p>ಪುರಂದರಗಡದಲ್ಲಿ ಹುಟ್ಟಿದನಂತೆ<br /> ಹೆಸರು ಶೀನಪ್ಪ ನಾಯಕ.<br /> ದಮ್ಮಡಿ ದುಗ್ಗಾಣಿ ಗಂಟಿಕ್ಕಿ<br /> ಆದ ಜಿಪುಣಾಗ್ರೇಸರ ನಾಯಕ!</p>.<p>ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತೆ<br /> ಅದೊಂದು ದಿನ ಬಡ ಬ್ರಾಹ್ಮಣನೊಬ್ಬ ಬಂದಿದ್ದ.<br /> ಅವನೆದುರು ದೀನವದನನಾಗಿ ನಿಂತಿದ್ದ.<br /> ಮಗನ ಮುಂಜಿಗಾಗಿ ಹಣಕಾಸು ಬೇಡಿದ್ದ.</p>.<p>ಎಂಜಲ ಕೈಯ್ಯಲ್ಲಿ ಕಾಗೆಯನ್ನೂ ಓಡಿಸದವ<br /> ಕೈಯೆತ್ತಿ ದಾನ ನೀಡಲಿಲ್ಲ.<br /> ಇಂದು ಬಾ ನಾಳೆಬಾ ಎನ್ನತೊಡಗಿದ<br /> ಆದರೆ ಆ ಬಡವ ಬಿಡಲಿಲ್ಲ.</p>.<p>ನಾಯಕನ ಸರಾಫ ಕಟ್ಟೆಯಲ್ಲಿ<br /> ಅವನಿಗೆ ಏನೂ ಗಿಟ್ಟಲಿಲ್ಲ.<br /> ಅದಕ್ಕೆ ಅವನು ಅವನ ಮನೆಗೇ ಹೋದ.<br /> ಸಾಧ್ವಿ ಸರಸ್ವತಿಯಿದ್ದಳು. ನಾಯಕ ಅಲ್ಲಿರಲಿಲ್ಲ.</p>.<p>ನೊಂದು ನುಡಿದಳು ಸರಸ್ವತಿ,<br /> `ನಾನು ಪರಾಧೀನೆ. ನಾನೇನು ಕೊಡಬಲ್ಲೆ~<br /> ಅವನೆಂದ, `ನಿನ್ನ ಮುತ್ತಿನ ಮೂಗತಿ ಕೊಡು ತಾಯಿ<br /> ನಾನು ಇನ್ನೇನನ್ನೂ ಒಲ್ಲೆ....~</p>.<p>ದ್ವಿಜ ಎರಡನೇ ಬಾರಿಗೆ<br /> ಸರಾಫ ಕಟ್ಟೆಗೆ ಬರುತ್ತಾನೆ.<br /> ಮೂಗುತಿಯ ಬೆಲೆ ಕಟ್ಟಲು ಕೇಳುತ್ತಾನೆ.<br /> ನಾಯಕ ಕ್ರುದ್ಧನಾಗಿ ಮನೆಗೆ ಹೋಗುತ್ತಾನೆ.</p>.<p>ನಾಯಕ ಸತಿಯನ್ನು ಪೀಡಿಸಲು<br /> ವಿಷಪ್ರಾಶನ ಮಾಡಲು ಹೋಗುತ್ತಾಳೆ.<br /> ಮೂಗತಿ ಬಟ್ಟಲಲ್ಲಿ ಬಂದುಬಿದ್ದಾಗ<br /> ಏನೊಂದೂ ಅರಿಯದೆ ವಿಚಲಿತಳಾಗುತ್ತಾಳೆ.</p>.<p>`ಎಲ್ಲಾ ಲೊಳಲೊಟ್ಟೆ~ ಎನ್ನುತ್ತ ನಾಯಕ<br /> `ಒಂದು ದಳ ಶ್ರೀತುಳಸಿ~ ಇಡುತ್ತಾನೆ.<br /> ತನ್ನದನ್ನೆಲ್ಲ `ಕೃಷ್ಣಾರ್ಪಣ~ ಎನ್ನುತ್ತ<br /> ತಾಳತಂಬೂರಿ ಹಿಡಿದು ನಡೆದುಬಿಡುತ್ತಾನೆ!</p>.<p>ಜಿಪುಣ ನಾಯಕ ಹರಿದಾಸನಾದುದ ಕಂಡು<br /> ವ್ಯಾಸತೀರ್ಥರು ನಿಬ್ಬೆರಗಾಗುತ್ತಾರೆ.<br /> `ಪುರಂದರ ವಿಠಲ~ ಎಂಬ ಅಂಕಿತವನ್ನಿತ್ತು<br /> ಕನ್ನಡದಲ್ಲಿ ಶ್ರೀಹರಿಯ ಕೊಂಡಾಡೆಂದು ಹರಸುತ್ತಾರೆ.</p>.<p>ಸತಿಯ `ಮುಕ್ತಿಯ ಮೂಗುತಿ~ಯಿಂದ<br /> ಶೀನಪ್ಪ ಪುರಂದರದಾಸನಾದ.<br /> `ಕೆರೆಯ ನೀರನು ಕೆರೆಗೆ ಚೆಲ್ಲಿರಿ~<br /> `ಮಾನವ ಜನ್ಮ ದೊಡ್ಡದು~ ಎನ್ನುತ್ತ ದಾಸಶ್ರೇಷ್ಠನಾದ!</p>.<p><strong>(ಜನವರಿ 23 ಪುರಂದರದಾಸರ ಆರಾಧನಾ ದಿನ).</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಂದಪದ್ಯ</strong></p>.<p>ತಂಬೂರಿಯನು ಮೀಟಿ<br /> ಜಂಗದ ಜಂಜಡ ದಾಟಿ<br /> ಹೋದ ಹೋದನಾ ದಾಸ<br /> ಅವನೇ ಪುರಂದರದಾಸ!</p>.<p>ಪುರಂದರಗಡದಲ್ಲಿ ಹುಟ್ಟಿದನಂತೆ<br /> ಹೆಸರು ಶೀನಪ್ಪ ನಾಯಕ.<br /> ದಮ್ಮಡಿ ದುಗ್ಗಾಣಿ ಗಂಟಿಕ್ಕಿ<br /> ಆದ ಜಿಪುಣಾಗ್ರೇಸರ ನಾಯಕ!</p>.<p>ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತೆ<br /> ಅದೊಂದು ದಿನ ಬಡ ಬ್ರಾಹ್ಮಣನೊಬ್ಬ ಬಂದಿದ್ದ.<br /> ಅವನೆದುರು ದೀನವದನನಾಗಿ ನಿಂತಿದ್ದ.<br /> ಮಗನ ಮುಂಜಿಗಾಗಿ ಹಣಕಾಸು ಬೇಡಿದ್ದ.</p>.<p>ಎಂಜಲ ಕೈಯ್ಯಲ್ಲಿ ಕಾಗೆಯನ್ನೂ ಓಡಿಸದವ<br /> ಕೈಯೆತ್ತಿ ದಾನ ನೀಡಲಿಲ್ಲ.<br /> ಇಂದು ಬಾ ನಾಳೆಬಾ ಎನ್ನತೊಡಗಿದ<br /> ಆದರೆ ಆ ಬಡವ ಬಿಡಲಿಲ್ಲ.</p>.<p>ನಾಯಕನ ಸರಾಫ ಕಟ್ಟೆಯಲ್ಲಿ<br /> ಅವನಿಗೆ ಏನೂ ಗಿಟ್ಟಲಿಲ್ಲ.<br /> ಅದಕ್ಕೆ ಅವನು ಅವನ ಮನೆಗೇ ಹೋದ.<br /> ಸಾಧ್ವಿ ಸರಸ್ವತಿಯಿದ್ದಳು. ನಾಯಕ ಅಲ್ಲಿರಲಿಲ್ಲ.</p>.<p>ನೊಂದು ನುಡಿದಳು ಸರಸ್ವತಿ,<br /> `ನಾನು ಪರಾಧೀನೆ. ನಾನೇನು ಕೊಡಬಲ್ಲೆ~<br /> ಅವನೆಂದ, `ನಿನ್ನ ಮುತ್ತಿನ ಮೂಗತಿ ಕೊಡು ತಾಯಿ<br /> ನಾನು ಇನ್ನೇನನ್ನೂ ಒಲ್ಲೆ....~</p>.<p>ದ್ವಿಜ ಎರಡನೇ ಬಾರಿಗೆ<br /> ಸರಾಫ ಕಟ್ಟೆಗೆ ಬರುತ್ತಾನೆ.<br /> ಮೂಗುತಿಯ ಬೆಲೆ ಕಟ್ಟಲು ಕೇಳುತ್ತಾನೆ.<br /> ನಾಯಕ ಕ್ರುದ್ಧನಾಗಿ ಮನೆಗೆ ಹೋಗುತ್ತಾನೆ.</p>.<p>ನಾಯಕ ಸತಿಯನ್ನು ಪೀಡಿಸಲು<br /> ವಿಷಪ್ರಾಶನ ಮಾಡಲು ಹೋಗುತ್ತಾಳೆ.<br /> ಮೂಗತಿ ಬಟ್ಟಲಲ್ಲಿ ಬಂದುಬಿದ್ದಾಗ<br /> ಏನೊಂದೂ ಅರಿಯದೆ ವಿಚಲಿತಳಾಗುತ್ತಾಳೆ.</p>.<p>`ಎಲ್ಲಾ ಲೊಳಲೊಟ್ಟೆ~ ಎನ್ನುತ್ತ ನಾಯಕ<br /> `ಒಂದು ದಳ ಶ್ರೀತುಳಸಿ~ ಇಡುತ್ತಾನೆ.<br /> ತನ್ನದನ್ನೆಲ್ಲ `ಕೃಷ್ಣಾರ್ಪಣ~ ಎನ್ನುತ್ತ<br /> ತಾಳತಂಬೂರಿ ಹಿಡಿದು ನಡೆದುಬಿಡುತ್ತಾನೆ!</p>.<p>ಜಿಪುಣ ನಾಯಕ ಹರಿದಾಸನಾದುದ ಕಂಡು<br /> ವ್ಯಾಸತೀರ್ಥರು ನಿಬ್ಬೆರಗಾಗುತ್ತಾರೆ.<br /> `ಪುರಂದರ ವಿಠಲ~ ಎಂಬ ಅಂಕಿತವನ್ನಿತ್ತು<br /> ಕನ್ನಡದಲ್ಲಿ ಶ್ರೀಹರಿಯ ಕೊಂಡಾಡೆಂದು ಹರಸುತ್ತಾರೆ.</p>.<p>ಸತಿಯ `ಮುಕ್ತಿಯ ಮೂಗುತಿ~ಯಿಂದ<br /> ಶೀನಪ್ಪ ಪುರಂದರದಾಸನಾದ.<br /> `ಕೆರೆಯ ನೀರನು ಕೆರೆಗೆ ಚೆಲ್ಲಿರಿ~<br /> `ಮಾನವ ಜನ್ಮ ದೊಡ್ಡದು~ ಎನ್ನುತ್ತ ದಾಸಶ್ರೇಷ್ಠನಾದ!</p>.<p><strong>(ಜನವರಿ 23 ಪುರಂದರದಾಸರ ಆರಾಧನಾ ದಿನ).</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>