ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, `ಕವಿತೆ, ನಾಟಕಗಳ ಮೂಲಕ ಕಂಬಾರ ವಿಶಿಷ್ಟ ಸಂವೇದನೆಯ ಹರಿಕಾರರಾಗಿ ಪರಿಚಯಗೊಂಡಿದ್ದಾರೆ. ಅವರ ಒಟ್ಟು ಕೃತಿಯಲ್ಲಿ ಊಳಿಗಮಾನ್ಯ, ಬಂಡವಾಳಶಾಹಿ ಮತ್ತು ಸಾಮಾಜಿಕ ಸಮಸ್ಯೆಗಳ ವಿವಿಧ ಆಯಾಮಗಳನ್ನು ಬಿಚ್ಚಿಟ್ಟಿದ್ದಾರೆ~ ಎಂದು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ, ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ವಿಮರ್ಶಕ ಪ್ರೊ.ಕೆ.ಮರುಳಸಿದ್ಧಪ್ಪ ಇತರರು ಉಪಸ್ಥಿತರಿದ್ದರು.