ಹುಬ್ಬಳ್ಳಿ: `ಬಿಜೆಪಿಯ ಮುಖಂಡರು ಅಧಿಕಾರದ ಲಾಲಸೆ ದೂರ ಮಾಡಿ ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು. ಸಾಮರಸ್ಯದಿಂದ ಮುನ್ನಡೆದು ಪೂರ್ಣಾವಧಿ ಆಡಳಿತ ನೀಡಬೇಕು~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ರಾಘವೇಂದ್ರ ಮಠದಲ್ಲಿ ಗುರುವಾರ ಆಯೋಜಿಸಿದ್ದ ರಾಘವೇಂದ್ರರ ಸಪ್ತಾಹ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಭಿನ್ನಾಭಿಪ್ರಾಯ ಮರೆತು ಜನಾದೇಶಕ್ಕೆ ಬೆಲೆ ಕೊಡಬೇಕು ಎಂದರು.