ಸರ್ಕಾರದ ಕೆಲವು ಇಲಾಖೆಗಳಲ್ಲಿ ಇನ್ನೂ ಪುರಾತನ ಕಾಲದ ವ್ಯವಸ್ಥೆ ಇದೆ. ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಭೂಗತ ಪಾತಕಿ ವಿರುದ್ಧದ ಕಾರ್ಯಾಚರಣೆಯ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಗೆ ದೇಹ ಮತ್ತು ತಲೆಯ ರಕ್ಷಣೆಗೆ ಯಾವುದೇ ಗುಂಡು ನಿರೋಧಕ ರಕ್ಷಾಕವಚ ಇರುವುದಿಲ್ಲ. ಆದ್ದರಿಂದ ಕಾರ್ಯಾಚರಣೆಗಳಲ್ಲಿ ನೂರಾರು ರಕ್ಷಣಾ ಸಿಬ್ಬಂದಿ ಸಾವನ್ನಪ್ಪುವಂತಾಗಿದೆ.
ಇತ್ತೀಚೆಗೆ ಗುಲ್ಬರ್ಗದಲ್ಲಿ ಭೂಗತ ಪಾತಕಿ ಮುನ್ನಾ ಮೇಲಿನ ಕಾರ್ಯಾಚರಣೆಯು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಪೊಲೀಸ್ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಂಡೆ, ಹಾಗೂ ಇತರರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸರ್ಕಾರ, ಪೊಲೀಸ್ ಸಿಬ್ಬಂದಿಗೆ ಅಗತ್ಯ ರಕ್ಷಾ ಕವಚ ನೀಡುವುದು ಸೂಕ್ತ.
-ಡಾ. ಸೂರಪ್ಪ ನಾಯ್ಕ, ಬೆಂಗಳೂರು.