ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಆರಂಭವಾದ ಆರು ದಿನ ನಡೆಯುವ ವಿಧಾನ ಮಂಡಲ ಅಧಿವೇಶನದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪೊಲೀಸರಿಗೆ `ಒಂದಿಷ್ಟು ಅನ್ನ ಮತ್ತು ಬಣ್ಣದ ನೀರಿನಂತಿರುವ ಸಾಂಬಾರ' ಊಟಕ್ಕೆ ಹಾಕಿ ಕರ್ತವ್ಯ ಮಾಡಲು ಅಧಿಕಾರಿಗಳು ಆದೇಶ ಮಾಡಿರುವುದನ್ನು ಪತ್ರಿಕೆಯಲ್ಲಿ ಓದಿ ಬಹಳ ಖೇದವೆನಿಸಿತು.
ಸರ್ಕಾರ ಸಚಿವರ, ಶಾಸಕರ ಹಾಗೂ ಅಧಿಕಾರಿಗಳ ಒಂದು ಊಟಕ್ಕಾಗಿ ಸುಮಾರು 50-60 ಲಕ್ಷ ವೆಚ್ಚ ಮಾಡುತ್ತಿದೆ. ಅಧಿವೇಶನವನ್ನು ಸುರಕ್ಷಿತವಾಗಿ ನಡೆಯಲು 24 ಗಂಟೆ ಕರ್ತವ್ಯ ನಿರ್ವಹಿಸಿ, ಭದ್ರತೆ ನೀಡಲು ಸಿದ್ಧರಿರುವ ಅಮಾಯಕ ಪೊಲೀಸರಿಗೆ ಅವ್ಯವಸ್ಥಿತ ರೀತಿಯಲ್ಲಿ ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ? ಯಾಕೆ ಪೊಲೀಸರು ಮನುಷ್ಯರಲ್ಲವೇ?