ನವದೆಹಲಿ (ಪಿಟಿಐ): ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದುವ ಅರೆಸೇನಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು `ಹುತಾತ್ಮರು' ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ.
ಈ ಮುನ್ನ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಸೈನಿಕರನ್ನು ಮಾತ್ರ `ಹುತಾತ್ಮ' ಎಂದು ಪರಿಗಣಿಸಲಾಗುತ್ತಿತ್ತು.
ಕೇಂದ್ರ ಗೃಹ ರಾಜ್ಯ ಸಚಿವ ಆರ್. ಪಿ.ಎನ್. ಸಿಂಗ್, ಈ ಬಗ್ಗೆ ರಾಜ್ಯ ಸರ್ಕಾರ ಗಳ ಅಭಿಪ್ರಾಯ ತಿಳಿಸಲು ಕೇಳಿದ್ದೇವೆ ಎಂದು ಮಂಗಳವಾರ ಇಲ್ಲಿ ಹೇಳಿದರು.