ಶಿವಸುಂದರ್ ನಿರ್ಮಿಸುತ್ತಿರುವ `ಪ್ಯಾಸೆಂಜರ್~ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತಾವರೆಕೆರೆ ಮಾರಮ್ಮನ ದೇವಸ್ಥಾನದಲ್ಲಿ ನಿರ್ದೇಶಕ ರೂಪೇಶ್.ಡಿ.ರಾಜಾ ಚಿತ್ರಿಸಿಕೊಂಡರು.
ಶಶಿಕುಮಾರ್, ಜೈಜಗದೀಶ್, ಮಯೂರ್ ಪಟೇಲ್, ಜಾಕಿಚಂದ್ರು, ಕಾಶಿ, ಪ್ರಕಾಶ್ಶೆಣೈ, ಬ್ಯಾಂಕ್ ಜನಾರ್ದನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್ಮೂರ್ತಿ ಛಾಯಾಗ್ರಹಣವಿದೆ. ಆರ್.ಡಿ.ರವಿ ಸಂಕಲನ, ಮಾಸ್ಮಾದ ಸಾಹಸ ನಿರ್ದೇಶನ ಇದೆ.
ಮಂಜು ಮಾಂಡವ್ಯ ಮಾತು ಬರೆದಿದ್ದಾರೆ. ಶಶಿಕುಮಾರ್, ಮಯೂರ್ ಪಟೇಲ್, ಜೈಜಗದೀಶ್, ಅರ್ಚನ, ಸತ್ಯಜಿತ್, ಪ್ರಕಾಶ್ ಶೆಣೈ ಮುಂತಾದವರು ನಟಿಸಿದ್ದಾರೆ.
`ಸ್ತ್ರೀಶಕ್ತಿ~ಗೆ ಭರದ ಚಿತ್ರೀಕರಣ
`ಸ್ತ್ರೀಶಕ್ತಿ~ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ತಂದೆತಾಯಿ ಅಪ್ಪಣೆ ಪಡೆದು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಮನೆಗೆ ಬಂದ ಮಗ ಹಾಗೂ ಸೊಸೆಯನ್ನು ಪೋಷಕರು ಸಂತೋಷದಿಂದ ಬರ ಮಾಡಿಕೊಳ್ಳುತ್ತಾರೆ.
ಈ ಸನ್ನಿವೇಶವನ್ನು ನಿರ್ದೇಶಕ ಎಸ್.ವಿ.ಸುರೇಶ್ ಚಿತ್ರಿಸಿಕೊಂಡರು. ರಾಜೀವ್, ಸೋನು, ಶರತ್ಲೋಹಿತಾಶ್ವ, ತುಳಸಿ, ಶಿವಮಣಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಎಸ್.ವಿ.ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣವಿದೆ. ರಾಜೀವ್, ಸೋನು, ಸುಂದರರಾಜ್, ತುಳಸಿ ರಾಮಕೃಷ್ಣ ಮುಂತಾದವರ ಅಭಿನಯವಿದೆ.