ಬೀದರ್: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಲು ಎನ್.ಎಸ್.ಎಸ್. ಶಿಬಿರಗಳು ಪೂರಕವಾಗಿವೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯಲ್ಲಪ್ಪ ದಶವಂತರ ನುಡಿದರು.
ನಾರ್ಮಾ ಫೆಂಡ್ರಿಕ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವು ತಾಲ್ಲೂಕಿನ ಮರ್ಜಾಪುರ (ಗವಿ) ಗ್ರಾಮದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾಲೇಜಿನ ಉಪಾಧ್ಯಕ್ಷ ನೆಲ್ಸನ್ ಸುಮಿತ್ರಾ, ಮುಖ್ಯಗುರು ಬಿ.ಕೆ. ಸುಂದರರಾವ, ಪ್ರಮುಖರಾದ ಸ್ಟ್ಯಾನ್ಲಿ ಜಾನ್, ಮನೋಶಾಂತ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ನಲೀನಕುಮಾರ ಎಸ್. ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಆರ್. ವಿಜಯಕುಮಾರ ನಿರೂಪಿಸಿದರು.