ನಾಲ್ಕನೇ ತರಗತಿ ವಿಭಾಗದ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ತರಕ್ಷಾ ಆಡರಕಟ್ಟಿ ಪ್ರಥಮ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಹಾನ್ ಕಣವಿ ದ್ವಿತೀಯ, ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಶಮೀರ್ ಹಲಗೇರಿ ದ್ವಿತೀಯ ಹಾಗೂ ಆರನೇ ತರಗತಿ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ಉಮ್ಮೆಸಲ್ಮಾ ಆಡರಕಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಂಟನೇ ತರಗತಿ ವಿಭಾಗದ ಸ್ಥಳದಲ್ಲಿಯೇ ಮಾದರ ತಯಾರಿಸುವ ಸ್ಪರ್ಧೆಯಲ್ಲಿ ತೌಸಿನ್ಬಾನು ಪಿರಖಾನವರ ಹಾಗೂ ಸಹರಿನ್ ಲಕ್ಷ್ಮೇಶ್ವರ ಪ್ರಥಮ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಸ್ವಾಲಿಹಾ ಹಲಗೇರಿ ಪ್ರಥಮ, ಜನಪದ ಗೀತೆ ಸ್ಪರ್ಧೆಯಲ್ಲಿ ನಗೀನಾ ಜಿಗಳೂರ ದ್ವಿತೀಯ ಹಾಗೂ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್ಡಿಎಂಸಿ ಅಧ್ಯಕ್ಷ ಅಶೋಕ ಗಂಟಿಸಿದ್ದಪ್ಪನವರ, ಸಮೂಹ ಸಂಪನ್ಮೂಲ ವ್ಯಕ್ತಿ ಜೆ.ಎಂ.ದೊಡ್ಡಮನಿ, ಕಾರ್ಯಕ್ರಮ ಆಯೋಜಕಿ ಶೈಲಜಾ ಹಲಗೇರಿ, ಮುಖ್ಯ ಶಿಕ್ಷಕರಾದ ಉಷಾ ಕರಬಸನಗೌಡ್ರ ಮತ್ತು ಎ.ಪಿ.ಮೋಸಿನ್, ಶಾಲೆಯ ಸಿಬ್ಬಂದಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.