ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

Last Updated 21 ಆಗಸ್ಟ್ 2012, 5:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು:  ಪೊನ್ನಂಪೇಟೆ ನಾಗರಿಕ ಸೇವಾ ಸಮಿತಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೋಮವಾರ ಪ್ರೋತ್ಸಾಹ ಧನ ವಿತರಿಸಲಾಯಿತು.

ಸೇವಾ ಸಮಿತಿ ಅಧ್ಯಕ್ಷ ಪಿ.ಬಿ. ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದು ಅಧ್ಯಯನದಲ್ಲಿ ಮುಂದಿರುವ ಬಡ 6 ಮಂದಿ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು. ಪೊನ್ನಂಪೇಟೆ ಪದವಿ ಪೂರ್ವ ಕಾಲೇಜಿನ ದ್ವಿತೀಯ  ಪಿಯುಸಿ ವಿದ್ಯಾರ್ಥಿಗಳಾದ ವಿ.ಆರ್.ಶಾಲಿನಿ, ಎನ್.ಡಿ.ವೀಣಾ ಅವರಿಗೆ ತಲಾ 1ಸಾವಿರ, 10 ನೇ ತರಗತಿ ವಿದ್ಯಾರ್ಥಿಗಳಾದ  ಪಿ.ಎಸ್.ಸುಜಿ, ಪಿ.ಎಸ್.ಗೀತಾ ಅವರಿಗೆ ತಲಾ ರೂ. 750, ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯ ಬಿ.ಬಿ.ದೇಚಮ್ಮ, ಜಿ.ನೇತ್ರ ಅವರಿಗೆ ತಲಾ ರೂ. 500 ಧನಸಹಾಯ ನೀಡಲಾಯಿತು.

ದಾನಿಗಳು ಹಾಗೂ ಸಂಘದ ಪದಾಧಿಕಾರಿಗಳಾದ ಸಿ.ಕೆ.ಸೋಮಯ್ಯ, ಎಂ.ಪಿ.ಅಪ್ಪಚ್ಚು, ಪಿ.ಎಂ.ಗಣಪತಿ, ಪಿ.ಪಿ.ಪ್ರಭಾಕರ, ಪಿ.ಬಿ. ಪೂಣಚ್ಚ ತಲಾ ರೂ.1ಸಾವಿರ, ಕೆ.ಕೆ.ಸೋಮಯ್ಯ, ವಿಮಲಾ ಬೋಪಯ್ಯ, ತಲಾ ರೂ.500 ಪ್ರೋತ್ಸಾಹ ಧನ ನೀಡಿದ್ದರು. ಸಂಘದ  ಕಾರ್ಯದರ್ಶಿ ಪ್ರಭಾಕರ,ಸಿ.ಕೆ. ಸೋಮಯ್ಯ, ಎಂ.ಪಿ.ಗಣಪತಿ, ಎಂ.ಪಿ.ಅಪ್ಪಚ್ಚು, ಚಿಮ್ಮಣಮಾಡ ವಾಸು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT