ದೊಡ್ಡಬಳ್ಳಾಪುರ: ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿನ ಸುಪ್ತಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕಿ ಕೆ.ಎಸ್.ಪ್ರಭಾ ಹೇಳಿದರು. ಎಂ.ಎಸ್.ವಿ ಪಬ್ಲಿಕ್ ಸ್ಕೂಲ್ನಲ್ಲಿ ಆರ್ಟ್ ಗ್ರೂಫ್ವತಿಯಿಂದ ನಡೆದ ಬೇಸಿಗೆ ಚಿತ್ರಕಲೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ನಗರ ಪ್ರದೇಶದ ಮಕ್ಕಳು ಬೇಸಿಗೆ ರಜೆಯಲ್ಲಿ ಟಿ.ವಿ. ನೋಡುತ್ತಾ ಕಾಲ ಕಳೆಯುತ್ತಾರೆ. ಕ್ರೀಯಾಶಿಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಬೇಸಿಗೆ ಶಿಬಿರಗಳಲ್ಲಿ ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಕಲಿತದ್ದು ಉಪಯೋಗಕ್ಕೆ ಬರಲು ಸಾಧ್ಯವಾಗಲಿದೆ. ಶಾಲಾ ದಿನಗಳಲ್ಲಿನ ಕಲಿಕೆಗಿಂತ ಭಿನ್ನ ವಾತಾವರಣದಲ್ಲಿ ಬೇಸಿಗೆ ಶಿಬಿರಗಳು ನಡೆಯುವುದರಿಂದ ತಮಗೆ ಆಸಕ್ತಿ ಇರುವುದರಲ್ಲಿ ಕಲಿಗೆ ಸಾಧ್ಯವಾಗಲಿದೆ ಎಂದರು. ಸಮಾರೋಪದಲ್ಲಿ ಆರ್ಟ್ ಗ್ರೂಫ್ನ ಶಿವು, ಚಿತ್ರಕಲಾ ಶಿಕ್ಷಕರಾದ ಮಧು, ಕಿರಣ್, ಮಹಾಲಕ್ಷ್ಮೀ, ಬಸವರಾಜ್ ಹಾಗೂ ಎಂ.ಎಸ್.ವಿ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಸೀಮಾ, ನೂರ್ಜಾನ್ ಭಾಗವ ಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಬಿಡಿಸಿದ್ದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.