ಬೆಳಗಾವಿ: `ರಾಷ್ಟ್ರದಲ್ಲಿ 2020ರ ಹೊತ್ತಿಗೆ 50 ಸಣ್ಣ ರಾಜ್ಯಗಳಾಗಬಹುದು. ಆಗ ಉತ್ತರ ಕರ್ನಾಟಕ ಸಹ ಪ್ರತ್ಯೇಕ ರಾಜ್ಯವಾಗಬಹುದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಆಗಬೇಕು' ಎಂದು ಕೃಷಿ ಸಚಿವ ಉಮೇಶ ಕತ್ತಿ ಪುನರುಚ್ಚರಿಸಿದರು.
ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, `ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರಾಗಿಯೇ ಉಳಿಯುತ್ತೇವೆ. ಪ್ರತ್ಯೇಕ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೆ ಇಲ್ಲ.
ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವ ಬಯಕೆ ಇದೆ. ನನ್ನ ಮಗ ಪ್ರತ್ಯೇಕ ರಾಜ್ಯದ ಮುಖ್ಯಮಂತ್ರಿಯಾಗಬಹುದು' ಎಂದರು.