ಯಾರದ್ದೋ ಕಟ್ಟುಪಾಡಿಗೆ, ಒತ್ತಡಕ್ಕೆ ಜೋತು ಬಿದ್ದು ಸರ್ಕಾರವು ತೆಗೆದುಕೊಂಡ ನಿರ್ಣಯ ಇದಲ್ಲ. ಪಂಪ ಕಾವ್ಯ ವೈಭವಕ್ಕೆ ಅಕ್ಷರಶಃ ಮೌಲಿಕತೆಯನ್ನು ನೀಡಿ ಪಂಪನ ಹೆಸರನ್ನು ಅಜರಾಮರವಾಗಿಸುವಂತಹ ನಿರ್ಣಯವದು. ಸಾಧಕರು, ಸಂಶೋಧಕರು, ಬುದ್ಧಿ ಜೀವಿಗಳು ಏನೇ ಹೇಳಿದರೂ ‘ಬನವಾಸಿ’ಯ ಮಹತ್ವವನ್ನು ಪಂಪನೇ ಕೊಂಡಾಡಿರುವುದರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳವನ್ನು ಅಣ್ಣಿಗೇರಿಗೆ ಸ್ಥಳಾಂತರಿಸಬೇಕೆಂಬ ನಿರ್ಣಯ ವ್ಯರ್ಥ ಪ್ರಲಾಪದ್ದು.