ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ-ಗು ತಿ-ಗು ನಡುವಿನ ಕಂದರ

ಕವಿತೆ
ಅಕ್ಷರ ಗಾತ್ರ

ಯಾಕೆ ಹೀಗೆ?
ಕೇವಲ ವಾದ ಹೊರತು
ನನಗೂ ನಿನಗೂ
ಸಂವಾದವೇ ಸಾಧ್ಯವಾಗುತ್ತಿಲ್ಲ,
ಇಂದಿನ ಸಾಹಿತಿಗಳ ಹಾಗೆ!

ಹಿಂದೆ-
ಮಾತು ಮಾತಿಗೂ ಮುತ್ತು
ಹೆಜ್ಜೆ ಹೆಜ್ಜೆಗೂ ನಗು
ತುಳುಕಿಸುತ್ತಿದ್ದೆಯಲ್ಲ,
ಎಲ್ಲಿ ಹೋಯಿತೆ
ಆ ನಿನ್ನ ಸೊಗಸುಗಾರಿಕೆ?

ಬಲ್ಲೆ-
ನನ್ನ ಮನಸ್ಸು ಬದಲಾಯಿತು
ದೃಷ್ಟಿ ಬೇರೊಬ್ಬಳತ್ತ ಹರಿಯಿತು
ಎಂದು ಮತ್ತೆ ವಾದಕ್ಕೆ ಇಳಿಯಬೇಡ.

ನನ್ನದೂ-
ತಪ್ಪಿಲ್ಲವೆಂದಲ್ಲ
ವೈಯಾರದ ಒಂದು ನಡಿಗೆ
ತೇಲಿ ಬರುವ ಒಂದು ವಾರೆ ನೋಟ
ಇಂದೂ ನನ್ನ ಕಣ್ಣಿಗೆ
ಸಹಜ ಸೂಜಿಗಲ್ಲು; ದಿಟ

ಅಷ್ಟಕ್ಕೆ-
ಸಂಘ ಜೀವಿಗಳಂತೆ
ಸಂಪು ಹೂಡಿ
ನನ್ನೆದೆ ಬಿರಿಯಬೇಡ
ಬದುಕನ್ನು
ಚಿಲ್ಲರೆ ಮಾಡಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT