ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಸುವುದಾಗಿ ನಂಬಿಸಿ ಮೋಸ: ದೂರು ದಾಖಲು

Last Updated 6 ಜುಲೈ 2012, 6:10 IST
ಅಕ್ಷರ ಗಾತ್ರ

ಉಡುಪಿ: ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ವಿವಾಹ ಆಗಲು ನಿರಾಕರಿಸಿದ ಆರೋಪದ ಮೇಲೆ ಶ್ರೀಕಾಂತ್ ಎಂಬಾತನ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಕಾಂತ್ ವಿರುದ್ಧ ಶೀರೂರು ಗ್ರಾಮದ ಯುವತಿ ದೂರು ನೀಡಿದ್ದಾರೆ. ಆರೋಪಿ 2008ರಲ್ಲಿ ಪರಿಚಿತನಾದ. ಶ್ರೀಕಾಂತ್ ಪ್ರೀತಿಸುವುದಾಗಿ ಹೇಳಿದ. ವಸತಿ ಗೃಹಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ.

ಆ ನಂತರ ವಿವಾಹ ಆಗುವುದಿಲ್ಲ ಎಂದು ಹೇಳಿದ. ಆ ನಂತರ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಗಳಾದ ಶ್ರೀಧರ ಪೂಜಾರಿ, ಅಮ್ಮಣ್ಣಿ, ದೀಪಾ, ಸಹನಾ, ಕಿರಣ, ಸುರೇಂದ್ರ ಬೋಂಟ್ರ, ಕೌಶಿಕ್, ಲಲಿತಾ, ಶೇಖರ್, ಶುಭ, ಪೂಜಾ, ಇಂದಿರಾ, ಸುನಂದ, ಪದ್ದು, ಸಂದೀಪ, ಪ್ರಮೀಳಾ, ಹರೀಶ, ಶ್ವೇತಾ, ಸುಪ್ರಿತಾ, ಸಂಗೀತಾ, ಅರುಣ, ವಿನೋದಾ, ಪ್ರಕಾಶ, ಶಶಿಕಲಾ, ವಿದ್ಯಾ, ದಿವ್ಯಾ, ಅಜಿತ್, ಕರ್ಗಿ ಪೂಜಾರ್ತಿ, ಲೋಕು ಪೂಜಾರಿ, ವಿನೋದ, ಪವನ್, ಪವಿತ್ರ, ಅರುಣ್, ಪ್ರವೀಣ್, ಪ್ರಸನ್ನ, ಪ್ರಮೋದ್ ಮತ್ತು ನವೀನ್ ಅವರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಮದುವೆಯಾಗಲು ನಿರಾಕರಿಸಿದ ಅಲ್ಲದೆ ಬೇರೆಯವರನ್ನು ಮದುವೆಯಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT