ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ಪ್ಲಾಸ್ಟಿಕ್, ಕಾಗದ, ನೈಲಾನ್ ಬಟ್ಟೆ, ಸಾಂವಿಧಾನಿಕ ಅಳತೆಗಳಿಲ್ಲದ ರಾಷ್ಟ್ರಧ್ವಜ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲಾ ಸಹಾಯಕ ಆಯುಕ್ತೆ ಕವಿತಾ ರಾಜಾರಾಮ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಸಮನ್ವಯಕಾರ ಚಂದ್ರು ಮೋಗೆರ್ ಮಾತನಾಡಿ, ‘ಜ.26 ರಂದು ಅಲ್ಲಲ್ಲಿ ಧ್ವಜವಂದನೆಯ ಕಾರ್ಯಕ್ರಮವನ್ನು ಉತ್ಸಾಹ ಪೂರ್ವಕವಾಗಿ ನೆರವೇರಿಸುತ್ತಾರೆ. ಆದರೆ, ಅದೇ ದಿನ ಮಧ್ಯಾಹ್ನದಿಂದಲೇ ರಸ್ತೆಗಳಲ್ಲಿ, ಚರಂಡಿಗಳಲ್ಲಿ ರಾಷ್ಟ್ರಧ್ವಜ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ನ ಉಪಯೋಗದಿಂದ ತಕ್ಷಣಕ್ಕೆ ನಾಶವಾಗುವುದಿಲ್ಲ’ ಎಂದರು.