ಅದರ ಹಿಂದಿನ ಮರ್ಮ ಏನಿರಬಹುದು ಎಂದೂ ಇಡೀ ದೇಶಕ್ಕೇ ಗೊತ್ತು.ಇದೇ ಗುಂಗಿನಲ್ಲಿದ್ದ ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ನಾಟಕ ನೋಡಿದೆ.
ನಾಟಕ `ನಮ್ಮ ರಾಬರ್ಟ್ ಕ್ಲೈವ್'. ಕಥೆ, ಸಂಭಾಷಣೆ ಮತ್ತು ನಿರ್ದೇಶನ ಪ್ರಕಾಶ್ ಬೆಳವಾಡಿಯವರದು. ಅಭಿನಯ `ಸಮುದಾಯ' ತಂಡ. ಕ್ರಿ.ಶ.1600ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶ ಮಾಡಿದ್ದು, ಆ ಸಂದರ್ಭದಲ್ಲಿ ದೇಶದಲ್ಲಿನ ರಾಜರುಗಳು, ನವಾಬರು ಬ್ರಿಟಿಷರ ಆಮಿಷಗಳಿಗೆ ಬಲಿಯಾಗಿ ದೇಶದ ಒಂದೊಂದೇ ಪ್ರದೇಶಗಳನ್ನು ಬಿಟ್ಟುಕೊಡುತ್ತಾ ಕೊನೆಗೆ ಇಡೀ ದೇಶವನ್ನೇ ಒತ್ತೆ ಇಡುವ ದೃಶ್ಯ ಮನಕಲಕುವಂತಿತ್ತು.