ಕೃಷ್ಣರಾಜಪುರ: `ದೇವಸಂದ್ರ ಗಂಗಯ್ಯ ಶೆಟ್ಟಿ ಕೆರೆಯನ್ನು ಒತ್ತುವರಿಮಾಡಿಕೊಂಡು 15- 20 ವರ್ಷಗಳಿಂದ ವಾಸವಾಗಿದ್ದ 180 ಬಡ ಕುಟುಂಬಗಳಿಗೆ ಗುಂಜೂರು ಗ್ರಾಮದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ~ ಎಂದು ಎಂದು ಶಾಸಕ ಎನ್.ಎಸ್.ನಂದೀಶರೆಡ್ಡಿ ತಿಳಿಸಿದರು.
ತ್ರಿವೇಣಿನಗರ ಸರ್ಕಾರಿ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಆಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಾಲಿಕೆ ಸದಸ್ಯೆ ಆರ್. ಮಂಜುಳಾದೇವಿ, ಪಕ್ಷದ ಮುಖಂಡ ಕೇಶವ ಮೂರ್ತಿ, ಪಿಲ್ಲಪ್ಪ, ತಾಯಪ್ಪ, ಸಿ.ಎನ್. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.