ನೆಲಮಂಗಲ: ಖಾಸಗಿ ಕಾಲೇಜನ್ನೂ ನಾಚಿಸುವ ಎಲ್ಲ ಸೌಲಭ್ಯಗಳನ್ನು ತ್ಯಾಮಗೊಂಡ್ಲು ಕಾಲೇಜಿಗೆ ಕಲ್ಪಿಸಲಾಗಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.
ತಾಲ್ಲೂಕಿನ ತ್ಯಾಮಗೊಂಡ್ಲು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮತ್ತು ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ ನೋಟ್ ಪುಸ್ತಕ ವಿತರಿಸಿದರು. ಗ್ರಾ.ಪಂ ಅಧ್ಯಕ್ಷ ಜಗದೀಶ್ ಪ್ರತಿಭಾ ಪುರಸ್ಕಾರ ನೀಡಿದರು.
ಗ್ರಾಮದ ಪ್ರಮುಖ ಮಹಿಮಣ್ಣ ಕಾಲೇಜಿನ ಶ್ರೇಯಸ್ಸಿಗಾಗಿ ಶ್ರಮಿಸಿದ ಅಧ್ಯಾಪಕರನ್ನು ಸನ್ಮಾನಿಸಿದರು. ಡೈರಿ ಅಧ್ಯಕ್ಷ ಜಯರಾಮ್, ನಿವೃತ್ತ ಪ್ರಾಂಶುಪಾಲ ನಾಗರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗರಾಜು, ಹೊನ್ನಮ್ಮ , ಜಯಂತಿ, ಸಿದ್ದಯ್ಯ, ಮಂಜುನಾಥ್ ಮತ್ತಿತರರು ಇದ್ದರು.