ತಿರುವನಂತಪುರ (ಪಿಟಿಐ): ವಾಣಿಜ್ಯ ಉದ್ದೇಶಗಳಿಗಾಗಿ ಬತ್ತದ ಗದ್ದೆಗಳ ಮಾರಾಟ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಹೊಸ ಶಾಸನ ರೂಪಿಸಲು ಕೇರಳ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಇತ್ತೀಚೆಗೆ ವಾಣಿಜ್ಯ ಉದ್ದೇಶಕ್ಕೆ ಬತ್ತದ ಗದ್ದೆ ಮಾರುವ ಪ್ರವೃತ್ತಿ ಹೆಚ್ಚುತ್ತಿದ್ದು, ಕೃಷಿ ಅಪಾಯದಲ್ಲಿದೆ. ಹೀಗಾಗಿ ಕೃಷಿಕರಿಗೆ ಮಾತ್ರವೇ ಗದ್ದೆ ಮಾರಲು ಅಥವಾ ಹಸ್ತಾಂತರಿಸಲು ಈ ಕಾನೂನು ಅವಕಾಶ ಮಾಡಿಕೊಡಲಿದೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಗದ್ದೆಗಳ ರಕ್ಷಣೆಗೆ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಸಿಪಿಐನ ಸುನೀಲ್ ಕುಮಾರ್ ಮಂಡಿಸಿದ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಚಾಂಡಿ ಈ ಭರವಸೆ ನೀಡಿದರು.