ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಮಾತನಾಡಿ, ಜನ ಬದುಕಬೇಕು ಸಮಾಜ ಮುಖಿಯಾಗಿ. ಇಲ್ಲದ್ದಿದರೆ ಜೀವನ ವ್ಯರ್ಥ. ಆದ್ದರಿಂದ, ಟಿ.ವಿ. ನೋಡುವುದನ್ನು ಬಿಟ್ಟು ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಿ. ಆಗ ಜನ ಯಾಕೇ ಬದುಕಬೇಕು ಎನ್ನುವ ವಿಷಯ ಅರಿವಿಗೆ ಬರುತ್ತದೆ ಎಂದರು.
ಪಾಂಶುಪಾಲರಾದ ಡಾ.ಜೆ. ಜಯಂತಿ ಅಧ್ಯಕ್ಷತೆ ವಹಿಸಿದ್ದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ, ಸಾಗರದ ಎಲ್ಐಸಿ ಜಯರಾಮ, ನಲ್ಲೂರು ಜೂನಿಯರ್ ಕಾಲೇಜು ಉಪನ್ಯಾಸಕ ಡಾ.ಬಿದರಗೊಡು ನಾಗೇಶ್, ಶಿರಾಳಕೊಪ್ಪ ಕದಂಭ ಕಾಲೇಜಿನ ಉಪನ್ಯಾಸಕ ಡಾ.ರಾಜೇಂದ್ರ, ವಿವಿಧ ವಿಷಯಗಳ ಬಗ್ಗೆ ಹಾಡುತ್ತಾ ಮಾತನಾಡಿದರು. ಡಾ.ಮೇಟಿ ಮಲ್ಲಿಕಾರ್ಜನ ಸಮಾರೋಪ ಭಾಷಣ ಮಾಡಿದರು.
ಡಾ.ಕುಂಸಿ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ಎಚ್.ಎನ್. ವಿದ್ಯಾ ಸಂಗಡಿಗರು ಜನಪದ ಗೀತೆ ಹಾಡಿದರು. ಉಪನ್ಯಾಸಕ ಆರ್.ಕೆ. ವಿನಯ್ ಸ್ವಾಗತಿಸಿದರು. ಲೀಲಾವತಿ ವಂದಿಸಿದರು. ಟಿ. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.