ಕದಂಬರ ರಾಜಧಾನಿಯಾಗಿದ್ದ, ಪಂಪನು ಹಾಡಿಹೊಗಳಿದ ಬನವಾಸಿಯನ್ನು ನೋಡಲು ಜನ ಆಸಕ್ತಿಯಿಂದ ಬರುತ್ತಾರೆ. ಆದರೆ ನಾವು ಈ ಜನರಲ್ಲಿ ಬೇಡಿಕೊಳ್ಳುವುದೇನೆಂದರೆ ದಯ ವಿಟ್ಟು ನೀವು ಬನವಾಸಿಗೆ ಬರುವ ಸಾಹಸ ಮಾಡಬೇಡಿ. ಯಾಕೆಂದರೆ ಶಿರಸಿಯಿಂದ ಬನವಾಸಿಗೆ ಹೋಗುವ 24 ಕಿ.ಮೀ. ರಸ್ತೆ ಮಾಯವಾಗಿದೆ. ಅಲ್ಲಿ ಕೇವಲ ಮನುಷ್ಯ ಮತ್ತು ವಾಹನಗಳು ಮಾಯವಾಗಬಲ್ಲ ಹೊಂಡ ಗಳದ್ದೇ ಸಾಮ್ರಾಜ್ಯ.
ಈ ಹೊಂಡಗಳನ್ನು ಕದಂಬೋತ್ಸವ ಸಮಯದಲ್ಲಿ ತ್ಯಾಪೆ ಹಾಕಿ ಮುಚ್ಚುತ್ತಾರೆ. ಕೆಲವೇ ದಿನಗಳಲ್ಲಿ ಪುನಃ ಹೊಂಡ ಹಿಂದಿನಂತೆ ಸಿದ್ಧ. ಕದಂಬೋತ್ಸವಕ್ಕೆ ಬರುವ ವಿಚಾರವಿದ್ದಲ್ಲಿ ಎರಡು ಬಾರಿ ಯೋಚಿಸಿ. ನಮ್ಮವರೇ ಆದ (ಆರ್.ವಿ. ದೇಶಪಾಂಡೆ) ಪ್ರವಾಸೋದ್ಯಮ ಮಂತ್ರಿ, ಈ ರಸ್ತೆ ಆಗಬಾರದೆಂದು ಕಳೆದ 25 ವರ್ಷಗಳಿಂದ ಪ್ರಯತ್ನ ನಡೆಸಿ ಸಫಲರಾ ಗಿದ್ದಾರೆ. ಈ ಕ್ಷೇತ್ರದ ಶಾಸಕ (ಶಿವರಾಮ್ ಹೆಬ್ಬಾರ್) ಈ ರಸ್ತೆಗಿಂತ ಕ್ಷೇತ್ರದ ಇತರ ರಸ್ತೆಗಳೇ ಮುಖ್ಯ ಎಂದು ನುಣುಚಿಕೊಳ್ಳುತ್ತಾರೆ.
ನಿಮ್ಮ ಹಾಗೂ ನಿಮ್ಮ ವಾಹನದ ಆರೋಗ್ಯದ ರಕ್ಷಣೆ ಆಗಬೇಕೆಂದಲ್ಲಿ ದಯಮಾಡಿ ಬನವಾ ಸಿಗೆ ಬರಬೇಡಿ ಎಂದು ನಮ್ಮ ವಿನಂತಿ.ಹಾಗೆಯೇ ಕಳೆದ ಮೂರು ದಶಕಗಳಿಂದ ಈ ರಸ್ತೆ ಆಗದ ಹಾಗೆ ಸಫಲವಾಗಿ ಶ್ರಮಿಸಿದ ಉತ್ತರ ಕನ್ನಡ ಜನಪ್ರತಿನಿಧಿಗಳಿಗೆ ಹಾರ್ದಿಕ ಅಭಿನಂದನೆಗಳು.