ಕಬಿನಿ ನಾಲೆ ಬಳಿ ಪ್ರತಿಭಟನೆ
ವರುಣಾ ವಿಧಾನಸಭಾ ಕ್ಷೇತ್ರದ ಕಲ್ಕುಂದ ಗ್ರಾಮದಲ್ಲಿ ಕಬಿನಿ ನೀರು ಬಳಕೆದಾರರ ಸಹಕಾರ ಸಂಘ, ಭುವನೇಶ್ವರಿ ಸ್ನೇಹ ಬಳಗ, ವಿನಾಯಕ ಯುವಕರ ಬಳಗ ಹಾಗೂ ಕೂಲಿ ಕಾರ್ಮಿಕರು, ರೈತರು ಕಬಿನಿ ನಾಲೆಯ ಬಳಿಪ್ರತಿಭಟನೆ ನಡೆಸಿದರು.
ಗ್ರಾಮದ ಎಲ್ಲ ಅಂಗಡಿ, ಹೋಟೆಲ್ಗಳನ್ನು ಮುಚ್ಚಿಸಿ ನಂತರ ಗ್ರಾಮದ ಸಮೀಪ ಹಾದು ಹೋಗಿರುವ ಕಬಿನಿ ನಾಲೆಯ ಬಳಿ ತೆರಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕಬಿನಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ರತ್ನಶೇಖರ್, ಭುವನೇಶ್ವರಿ ಸ್ನೇಹ ಬಳಗದ ಶಿವರಾಜು, ವಿನಾಯಕ ಯುವಕರ ಬಳಗದ ಪುನೀತ್, ಸದುಕುಮಾರ್, ಧರ್ಮ, ವರ್ತಕರ ಸಂಘದ ಅಧ್ಯಕ್ಷ ಬಸಪ್ಪ, ರೈತ ಮುಖಂಡರಾದ ಪ್ರಭುಸ್ವಾಮಿ, ರಾಜಪ್ಪ, ಸ್ವಾಮಿ, ನಂಜುಂಡಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾದೇವಮ್ಮ, ರತ್ನಮ್ಮ ಇದ್ದರು.