ಬೆಂಗಳೂರು: ಕ್ರಿಸ್ಮಸ್ ದಿನವಾದ ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಎಂಟು ಸಾವಿರ ಜನರು ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಉದ್ಯಾನಕ್ಕೆ ರಜೆ ಇರುತ್ತದೆ. ಆದರೆ ಹೆಚ್ಚಿನ ಜನರ ಆಗಮನದ ನಿರೀಕ್ಷೆ ಇದ್ದುದರಿಂದ ಮಂಗಳವಾರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿತ್ತು.
ಮಂಗಳವಾರ ಒಂದೇ ದಿನದ ಟಿಕೆಟ್ ಮಾರಾಟದಿಂದ 8 ಲಕ್ಷ ರೂಪಾಯಿ ಆದಾಯ ಬಂದಿದೆ. ಹೊಸ ವರ್ಷವೂ ಮಂಗಳವಾರದ ದಿನವೇ ಬಂದಿರುವುದರಿಂದ ಜನವರಿ ಒಂದರಂದು ಕೂಡಾ ಉದ್ಯಾನ ತೆರೆದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.