`ಪಶ್ಚಿಮಘಟ್ಟದ 15 ಸ್ಥಳಗಳಲ್ಲಿ ರಾಂಪತ್ರೆಜಡ್ಡಿ ಸಂರಕ್ಷಣಾ ಯೋಜನೆ ಜಾರಿಯಾಗಲಿದ್ದು, ಸುಮಾರು 1ಸಾವಿರ ಎಕರೆ ಪ್ರದೇಶದಲ್ಲಿ ಈ ವಿಶಿಷ್ಟ ಪರಿಸರ ಸಂರಕ್ಷಣೆಗೆ ಅರಣ್ಯ ಸಮಿತಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಹಸಿರು ಆರೋಗ್ಯ ಅಭಿಯಾನವನ್ನು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಿಸ್ತರಿಸಲಾಗುತ್ತಿದೆ. ರಾಜ್ಯದ ಅರಣ್ಯ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ವಿಶ್ಲೇಷಿಸಿ ಅರಣ್ಯ ಪರಿಸ್ಥಿತಿ ಸಿದ್ಧಪಡಿಸಲು ತಜ್ಞರು, ಅಧಿಕಾರಿಗಳ ತಂಡ ರಚಿಸಿ ಮೂರು ತಿಂಗಳಲ್ಲಿ ಅರಣ್ಯ ವರದಿ ಪ್ರಕಟಿಸಲಾಗುವುದು.
ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಜೀವವೈವಿಧ್ಯ ದಾಖಲಾತಿ ಕಾರ್ಯಕ್ರಮವನ್ನು ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ 100 ಪ್ರೌಢಶಾಲೆಗಳಲ್ಲಿ ನಡೆಸಲಾಗುತ್ತಿದ್ದು, ಇದರಿಂದ 100 ಗ್ರಾಮಗಳ ಜೀವವೈವಿಧ್ಯ ದಾಖಲಾತಿ ವರದಿ ಸಿದ್ಧವಾಗಲಿದೆ' ಎಂದರು.