ಮೂಡುಬಿದಿರೆ: ‘ಬರಗೂರು ರಾಮಚಂದ್ರಪ್ಪ ನುಡಿಸಿರಿ ವಿರುದ್ಧ ಬಂಡಾಯ ಏಳಲು ಸಾಧ್ಯವೇ ಇಲ್ಲ. ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ನುಡಿಸಿರಿಗೆ ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಆಳ್ವಾಸ್ ವಿಶ್ವನುಡಿಸಿರಿಯ ಸಂಘಟಕ ಡಾ.ಮೋಹನ ಆಳ್ವ ಭಾನುವಾರ ಇಲ್ಲಿತಿಳಿಸಿದರು.
ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಯಾವುದೋ ಕಾರಣಕ್ಕಾಗಿ ಅವರು ಸಮಾಜ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಮೊದಲ ನುಡಿಸಿರಿಯನ್ನು ಅವರೇ ಉದ್ಘಾಟಿಸಿದ್ದು, ಅವರೇ ಇದೀಗ ಬಂಡಾಯ ಏಳುತ್ತಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.