ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಮಾರ್ಗ ಪ್ರಶಸ್ತಿಗೆ ಆಹ್ವಾನ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಬಸವ ಮಾರ್ಗ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ನೀಡುವ ಬಸವ ಮಾರ್ಗ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ.ಬಸವ ಮಾರ್ಗ ಪ್ರಶಸ್ತಿಯು ರೂ.5 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದ್ದು.
 
ಜೂನ್ 18ರಂದು ಸುರಪುರ ತಾಲ್ಲೂಕಿನ ಸತ್ಯಂಪೇಟೆಯಲ್ಲಿ ನಡೆಯಲಿರುವ ಲಿಂ. ಗುರಪ್ಪ ಯಜಮಾನರ 26ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಸಂತೋಷ ಸತ್ಯಂಪೇಟೆ ತಿಳಿಸಿದ್ದಾರೆ.

2005ರಿಂದ ಇಲ್ಲಿಯವರೆಗೆ ಪ್ರಕಟವಾದ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಎರಡು ಪ್ರತಿಗಳನ್ನು ಜೂನ್ 5ರ ಒಳಗಾಗಿ ಸಂತೋಷ ಸತ್ಯಂಪೇಟೆ, ಬಸವ ಮಾರ್ಗ, ಚರಬಸವೇಶ್ವರ ಕಾಲೋನಿ, ಶಹಾಪುರ-585223, ಯಾದಗಿರಿ (ಜಿಲ್ಲೆ) ಈ ವಿಳಾಸಕ್ಕೆ ಕೃತಿಗಳನ್ನು ಕಳುಹಿಸಬೇಕು.
 
ಹೆಚ್ಚಿನ ಮಾಹಿತಿಗೆ 9448411672, 7899148789ಗೆ ಸಂಪರ್ಕ ಮಾಡಬಹುದಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT