ವೈಟ್ಫೀಲ್ಡ್: ಸರ್ಜಾಪುರ ರಸ್ತೆ ದೊಮ್ಮಸಂದ್ರ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಶೀಘ್ರ ಚಾಲನೆ ನೀಡುವುದಾಗಿ ಗ್ರಾ.ಪಂ.ಸದಸ್ಯ ಬಿ.ಸಿ.ಉಮೇಶಬಾಬು ತಿಳಿಸಿದರು.
ದೊಮ್ಮಸಂದ್ರ-ಕೆಂಪೇಗೌಡ ಬಸ್ ನಿಲ್ದಾಣ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಯಲಹಂಕ-ಕೆಂಗೇರಿ-ಚಂದಾಪುರ-ಆನೇಕಲ್ ಸೇರಿದಂತೆ ವಿಧೆಡೆಗೆ ನೂತನ ಬಸ್ ಸಂಚಾರ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.