ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣವನ್ನು ಪ್ರಾರಂಭಿಸಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬನಶಂಕರಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯವು ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಪ್ರಾರಂಭವಾಗಿಲ್ಲ. ಪ್ರಯಾಣಿಕರು ಮಳೆಯಲ್ಲಿ, ಬಿಸಿಲಲ್ಲಿ, ಸೂರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣವನ್ನು ಆದಷ್ಟು ಶೀಘ್ರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದವರಲ್ಲಿ ವಿನಂತಿ.
-ಎಸ್. ಗುರುದತ್ತರಾವ್

ಫುಟ್‌ಪಾತ್ ಅವಸ್ಥೆ
ಮಹಾಲಕ್ಷ್ಮಿ ಲೇಔಟ್‌ಗೆ ಸೇರಿದ ಡಾ. ಮೋದಿ ಕಣ್ಣಾಸ್ಪತ್ರೆ ರಸ್ತೆಯಲ್ಲಿರುವ ಫುಟ್‌ಪಾತನ್ನು ನೋಡಿದರೆ ಯಾರಿಗಾದರೂ ಗಾಬರಿ ಉಂಟಾಗುತ್ತದೆ. ಇವುಗಳ ಮೇಲೆ ಕಾಲೂರಲು ಎರಡು ಸಲ ಯೋಚಿಸಬೇಕು, ಸಂಬಂಧಪಟ್ಟವರು ಇದರ ದುರಸ್ಥಿಗೆ ಕ್ರಮ ಕೈಗೊಳ್ಳುವುದು ಅಗತ್ಯ.
 

ಅಲ್ಲದೆ ಇದೇ ರಸ್ತೆಯಲ್ಲಿರುವ ಬಸ್ ತಂಗು ನಿಲ್ದಾಣಗಳಲ್ಲಿ ಕುಳಿತುಕೊಳ್ಳುವ ಸುಸಜ್ಜಿತ ಆಸನಗಳು ಇದ್ದವು. ಆದರೆ ಈಗ ಅವುಗಳು ಮಾಯವಾಗಿ ವೃದ್ಧ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದುದರಿಂದ ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕೆಂದು ವಿನಂತಿ.
-ಎಚ್.ಡಿ. ಲಕ್ಷ್ಮೀನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT