ಬನಶಂಕರಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯವು ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಪ್ರಾರಂಭವಾಗಿಲ್ಲ. ಪ್ರಯಾಣಿಕರು ಮಳೆಯಲ್ಲಿ, ಬಿಸಿಲಲ್ಲಿ, ಸೂರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣವನ್ನು ಆದಷ್ಟು ಶೀಘ್ರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದವರಲ್ಲಿ ವಿನಂತಿ.
-ಎಸ್. ಗುರುದತ್ತರಾವ್
ಫುಟ್ಪಾತ್ ಅವಸ್ಥೆ
ಮಹಾಲಕ್ಷ್ಮಿ ಲೇಔಟ್ಗೆ ಸೇರಿದ ಡಾ. ಮೋದಿ ಕಣ್ಣಾಸ್ಪತ್ರೆ ರಸ್ತೆಯಲ್ಲಿರುವ ಫುಟ್ಪಾತನ್ನು ನೋಡಿದರೆ ಯಾರಿಗಾದರೂ ಗಾಬರಿ ಉಂಟಾಗುತ್ತದೆ. ಇವುಗಳ ಮೇಲೆ ಕಾಲೂರಲು ಎರಡು ಸಲ ಯೋಚಿಸಬೇಕು, ಸಂಬಂಧಪಟ್ಟವರು ಇದರ ದುರಸ್ಥಿಗೆ ಕ್ರಮ ಕೈಗೊಳ್ಳುವುದು ಅಗತ್ಯ.