ಮದ್ದೂರು: ಕೆಎಸ್ಆರ್ಟಿಸಿ ಬಸ್ಸೊಂದು ಬೈಕ್ಗೆ ಡಿಕ್ಕಿ ಹೊಡೆದು ಕಂದಾಯ ನಿರೀಕ್ಷಕ ಮೃತಪಟ್ಟು, ಹಿಂಬದಿ ಸವಾರ ತೀವ್ರ ಗಾಯಗೊಂಡ ಘಟನೆ ಉಪ್ಪಿನಕೆರೆ ಗೇಟ್ ಬಳಿ ಭಾನುವಾರ ನಡೆದಿದೆ.
ಚನ್ನಪಟ್ಟಣದ ಪುರಸಭೆಯ ಕಂದಾಯ ನಿರೀಕ್ಷಕ ರವಿಕುಮಾರ್ (35) ಮೃತಪಟ್ಟವರು. ಗಾಯಗೊಂಡ ಹಿಂಬದಿ ಸವಾರ ಶ್ರೀನಿವಾಸ್ ಕೂಡ ಕಂದಾಯ ನಿರೀಕ್ಷಕರಾಗಿದ್ದಾರೆ. ಇವರನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದೊಯ್ಯಲಾಗಿದೆ. ಶಿಂಷಾಕ್ಕೆ ಚನ್ನಪಟ್ಟಣದಿಂದ ಬೈಕ್ನಲ್ಲಿ ತೆರಳಿದ್ದ ಇವರು ಸಂಜೆ 6.30ರ ಸಮಯದಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.