ಗೌರಿಬಿದನೂರು: ಪಟ್ಟಣದಲ್ಲಿ ಸೂಕ್ತ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಬಸ್ಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸ ಬೇಕಾದ ಅನಿವಾರ್ಯತೆ ನಿರ್ಮಾಣ ಆಗಿದೆ.
ನಗರಗೆರೆ, ವಾಟದಹೊಸಹಳ್ಳಿ, ಯಲ್ಲೋಡು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಈ ಪ್ರಯಾಣ ಸಾಮಾನ್ಯ. ಬಸ್ ವೇಗವಾಗಿ ಸಂಚರಿಸುವಾಗ ಆಯ ತಪ್ಪಿ ಬೀಳುವ ಅಪಾಯ ಇದ್ದರೂ ಪ್ರಯಾಣ ಮುಂದುವರೆದಿದೆ.
`ಗ್ರಾಮಕ್ಕೆ ಬೆಳಗಿನ ಸಮಯದಲ್ಲಿ ಒಂದೇ ಬಸ್ ಹೊರಡುವುದರಿಂದ ಖಾಸಗಿ ಬಸ್ ಸೇವೆ ಅನಿವಾರ್ಯ ವಾಗಿದೆ. ಆತಂಕದಲ್ಲಿ ಪ್ರತಿದಿನ ಸಂಚರಿಸಬೇಕಿದೆ. ಇದಕ್ಕೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ವಿದ್ಯಾರ್ಥಿ ಮಹೇಶ್.
`ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬೆಳಿಗ್ಗೆ 8 ರಿಂದ 10 ಗಂಟೆ ಸಮಯ ದಲ್ಲಿ ಕನಿಷ್ಠ ಮೂರು ಬಸ್ಗಳು ಸಂಚರಿಸಿದರೆ ಅನುಕೂಲವಾಗು ತ್ತದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನವುದು ವಿದ್ಯಾರ್ಥಿಗಳಾದ ಅನಿಲ್ಕುಮಾರ್, ನವೀನ್ಕುಮಾರ್ ಒತ್ತಾಯಿಸುತ್ತಾರೆ.