ನವದೆಹಲಿ (ಪಿಟಿಐ): ಬಹರೇನ್ನಲ್ಲಿರುವ ಸುಮಾರು 35ಲಕ್ಷ ಭಾರತೀಯರ ಸುರಕ್ಷತೆಯನ್ನು ಕಾಪಾಡುತ್ತೇವೆಂದು ಬಹರೇನ್ ವಿದೇಶಾಂಗ ಸಚಿವ ಶೇಖ್ ಖಾಲೀದ್ ಬಿನ್ ಅಹಮದ್ ಅವರು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಭರವಸೆ ನೀಡಿದರು.
ಭಾರತ ಪ್ರವಾಸದಲ್ಲಿರುವ ಬಹರೇನ್ ವಿದೇಶಾಂಗ ಸಚಿವ ಶೇಖ್ ಖಾಲೀದ್ ಅವರು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಬುಧವಾರ ಭೇಟಿ ಮಾಡಿ ಬಹರೇನ್ಸೇರಿದಂತೆ ಮಧ್ಯಪ್ರಾಚ್ಯದ ಇತ್ತೀಚಿನ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಿದರು.
ಈ ಮಾತುಕತೆಯ ಸಂದರ್ಭದಲ್ಲಿ ಖಾಲೀದ್ ಅವರು ಬಹರೇನ್ ಅಭಿವೃದ್ಧಿಗೆ ಭಾರತೀಯ ಸಮುದಾಯ ನೀಡಿದ ಕೊಡುಗೆಯನ್ನು ಸ್ಮರಿಸಿದರು.