ಢಾಕಾ (ಪಿಟಿಐ): ಜಮಾತೆ ಇಸ್ಲಾಮಿ ಮುಖಂಡನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಭುಗಿಲೆದ್ದಿರುವ ಹಿಂಸಾ ಚಾರ ಮುಂದುವರಿದಿದ್ದು ಸೋಮವಾರ ಐವರು ಸಾವನ್ನಪ್ಪಿದ್ದಾರೆ.
ಈ ಮಧ್ಯೆ 1971ರಲ್ಲಿ ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ವಿಜಯ ಸಾಧಿಸಿದ ಸ್ಮರಣೆಗಾಗಿ ದೇಶದೆಲ್ಲೆಡೆ ಕಾರ್ಯಕ್ರಮ ನಡೆಸಲಾಗಿದೆ. ಈ ಮಧ್ಯೆಯೂ ಹಿಂಸೆ ಮುಂದುವರಿದಿದೆ.
‘ನೈರುತ್ಯ ಸತ್ಖೈರ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ದಾಳಿ ಬಲಿ ಯಾದವರು ಜಮಾತ್ನ ಹೋರಾಟ ಗಾರರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುರುವಾರದಿಂದ ಆರಂಭವಾಗಿರುವ ಹಿಂಸಾಚಾರದಲ್ಲಿ ಕನಿಷ್ಠ ಪಕ್ಷ 30 ಮಂದಿ ಸಾವನ್ನಪ್ಪಿದ್ದಾರೆ.
ಪ್ರಮುಖ ನಗರಗಳಲ್ಲಿ ಪ್ರತಿಭಟನಾ-ಕಾರರು ರಸ್ತೆಗಿಳಿಯುವುದನ್ನು ತಡೆಯಲು ಅರೆ ಸೇನಾ ಪಡೆ, ಬಾಂಗ್ಲಾ ಗಡಿ ಭದ್ರತಾ ಪಡೆ (ಬಿಜಿಬಿ), ಮತ್ತು ಕ್ಷೀಪ್ರ ಕಾರ್ಯಾಚರಣೆ ಪಡೆ (ಆರ್ಎಬಿ)ಯ ಹೆಲಿಕಾಪ್ಟರ್ಗಳು ನಿಗಾ ವಹಿಸಿವೆ.