ನವದೆಹಲಿ: ಬಾಂಬ್ನಲ್ಲಿ ಟೈಮರ್ ಅಳಡಿಸಲು ಕಾಂಡೋಮ್ ಬಳಸುತ್ತಿದ್ದುದಾಗಿ ಉಗ್ರ ಯಾಸೀನ್ ಭಟ್ಕಳ, ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇದರಿಂದ ಇಂಡಿಯನ್ ಮುಜಾಹಿದೀನ್ ಕಚ್ಚಾ ಬಾಂಬ್ ತಯಾರಿಕೆ ತಂತ್ರಗಾರಿಕೆ ಕುತೂಹಲದ ತಿರುವು ಪಡೆದಿದೆ.
ಮೂರು ವರ್ಷಗಳ ಹಿಂದೆ, ವಾರಾಣಸಿಯ ಗಂಗಾ ನದಿ ತಟದ ಶೀತ್ಲಾ ಘಾಟ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಈ ತಂತ್ರ ಬಳಸಲಾಗಿತ್ತು.
ಮುಹಮ್ಮದ್ ಅಹ್ಮದ್ ಝರಾರ್ ಸಿದ್ದಿಬಾಪಾ ಎಂಬ ಮೂಲ ಹೆಸರನ್ನು ಹೊಂದಿರುವ ಭಟ್ಕಳ, ಪಶ್ಚಿಮ ಬಂಗಾಳದಿಂದ ಸ್ಫೋಟಕಗಳ ತಯಾರಿಕೆಗೆ ಹೈಡ್ರೋಜನ್ ಪೆರಾಕ್ಸೈಡ್ ತರುತ್ತಿದ್ದ.
ಈ ಬಾಂಬ್ಗಳನ್ನು 2005ರಲ್ಲಿ ಲಂಡನ್ ಸಾರ್ವಜನಿಕ ಸಂಚಾರ ವ್ಯವಸ್ಥೆ ಮೇಲೆ ದಾಳಿ ಮಾಡಲು ಅಲ್ಖೈದಾ ಮೊದಲ ಬಾರಿಗೆ ಯಶಸ್ವಿಯಾಗಿ ಪ್ರಯೋಗ ಮಾಡಿತ್ತು.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ. ಭಟ್ಕಳನು ಸುಮಾರು 200 ಲೀಟರ್ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಪಶ್ಚಿಮ ಬಂಗಾಳದ ರಾಸಾ ಯನಿಕ ವಸ್ತುಗಳ ಮಾರಾಟ ಅಂಗಡಿ ಯೊಂದರಿಂದ ತಂದಿದ್ದ. ಇವುಗಳನ್ನು ಮುಚ್ಚಿದ ಕಂಟೇನರ್ನಲ್ಲಿ ತುಂಬಿದ್ದ. ದ್ರವರೂಪದ ಪೆರಾಕ್ಸೈಡ್ ಸ್ಫೋಟಕಗಳಲ್ಲಿ ಟೈಮರ್ ಒದ್ದೆಯಾಗುವುದನ್ನು ತಪ್ಪಿಸಲು ಕಾಂಡೋಮ್ನಲ್ಲಿ ಅದನ್ನು ಇಟ್ಟು, ಕಂಟೇನರ್ನೊಳಗೆ ಮುಚ್ಚಿಡುತ್ತಿದ್ದ ಭಟ್ಕಳ.
ನಂತರ ಇದನ್ನು ಸ್ಫೋಟದ ಸ್ಥಳದಲ್ಲಿ ಇಡುತ್ತಿದ್ದ. ಶೀತ್ಲಾ ಘಾಟ್ನಲ್ಲಿ ಇದೇ ಮಾದರಿಯ ಸ್ಫೋಟಕವನ್ನು 2010ರ ಡಿಸೆಂಬರ್ 7ರಂದು ಇಟ್ಟು ಸ್ಫೋಟಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟ ನಡೆಸಿದ ಕೂಡಲೇ ಇಂಡಿಯನ್ ಮುಜಾಹಿದೀನ್ ಸಂಘಟನೆಯು ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಈ ದಾಳಿ ಮಾಡಿರುವ ಹೊಣೆಹೊತ್ತು ಮುಂಬೈನಿಂದ ಮಾಧ್ಯಮಗಳಿಗೆ, ಇ–ಮೇಲ್ ಸಂದೇಶ ಕಳುಹಿಸುತ್ತಿತ್ತು ಎಂದು ಭಟ್ಕಳ ಖಚಿತಪಡಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.