ಖಾನಾಪುರ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಆರ್.ಎನ್ ಶುಗರ್ಸ್ ಅಧ್ಯಕ್ಷ ನಾಸೀರ್ ಬಾಗವಾನ ಅವರು ತಾಲ್ಲೂಕಿನ ಗೋಲಿಹಳ್ಳಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಆರ್.ಎನ್. ಬಾಗವಾನ ಶುಗರ್ಸ್ನ ಕಾರ್ಖಾನೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಮಾಟ-ಮಂತ್ರ ಮಾಡಿ ಅಲ್ಲಲ್ಲಿ ಪೂಜಿಸಿದ ಲಿಂಬೆಹಣ್ಣು ಹಾಗೂ 22ರ ಮಧ್ಯರಾತ್ರಿ ಈ ಒಂದು ತೆಂಗಿನ ಕಾಯಿ, ಮೊಟ್ಟೆ ಸೇರಿದಂತೆ ಇನ್ನಿತರ ವಾಮಾಚಾರದ ಸಾಮಗ್ರಿಗಳನ್ನು ಇಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಕಳೆದ ಐದು ವರ್ಷಗಳಿಂದ ಜೆಡಿಎಸ್ ಪಕ್ಷ ಸಂಘಟನೆ ಜೊತೆಗೆ ಅಪಾರ ಜನಬೆಂಬಲ ಹೊಂದಿರುವ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ ಈ ವಿಧಾನ ಸಭೆ ಚುನಾವಣೆಯಲ್ಲಿ ಪರಾಭವಗೊಳ್ಳಲಿ ಎಂದು ಮಾಟ-ಮಂತ್ರ ಮಾಡಿಸಿ ಇಡಲಾಗುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ನಾಸೀರ್ ಬಾಗವಾನ ತಾವು ತಾಲ್ಲೂಕಿನ ರೈತರ ಕಬ್ಬಿನ ಸಂಕಷ್ಟ ದೂರಮಾಡಲು ಸಕ್ಕರೆ ಕಾರಖಾನೆಯನ್ನು ನಿರ್ಮಿಸಲಾಗುತ್ತಿದ್ದು, ಕಾರಖಾನೆ ಕಾಮಗಾರಿ ಪ್ರಾರಂಭಗೊಂಡ ದಿನದಿಂದಲೂ ತಮ್ಮ ಅಭಿವೃದ್ಧಿ ಪರ ಕಾರ್ಯಗಳನ್ನು ಸಹಿಸದ ಕೆಲ ರಾಜಕೀಯ ವ್ಯಕ್ತಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ.