ಕಸ-ಕಡ್ಡಿ ತೆಗೆದು ಶುಚಿಮಾಡಿದ್ದಾರೆ. ಈ ಕೆಲಸಕ್ಕೆ ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು ಎಂಬ ಭೇದವಿಲ್ಲದೆ ಎಲ್ಲರೂ ಜತೆಯಾಗಿದ್ದಾರೆ. ಎಲ್ಲರೂ ಸರದಿ ಮೇಲೆ ಬಾವಿಗಿಳಿದು ಶುಚಿ ಮಾಡುವಲ್ಲಿ ತ್ಲ್ಲಲಿನರಾಗಿದ್ದಾರೆ.
ಹಿಂದೆ ಈ ಬಾವಿಯನ್ನು ಕಲ್ಯಾಣಿ ಎಂದು ಕರೆಯಲಾಗುತ್ತಿತ್ತು. ಬಾವಿಯ ದಡದಲ್ಲಿ ಶಿವನ ದೇವಾಲಯವಿದೆ. ಗಂಗಮ್ಮನ ಪೂಜೆ ಸೇರಿದಂತೆ ಪೂಜೆ-ಪುನಸ್ಕಾರಗಳಿಗೆ ಇಲ್ಲಿನ ನೀರು ಶ್ರೇಷ್ಠ ಎಂಬುದು ಜನಜನಿತ. ಇಂಥ ಪವಿತ್ರ ಬಾವಿಯನ್ನು ಸಂಬಂಧಪಟ್ಟ ಇಲಾಖೆಯವರು ಉಳಿಸಿ ಸಂರಕ್ಷಿಸಬೇಕು ಎಂದು ಗ್ರಾಮಸ್ಥರ ಮನವಿ.