ಪ್ರಕರಣದ ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಡಿವೈಎಸ್ಪಿ ಪ್ರಸನ್ನ ವಿ.ರಾಜು ಅವರನ್ನು ವಿಚಾರಣೆ ಆರಂಭದಲ್ಲೇ ಪ್ರಶ್ನಿಸಿದ ನ್ಯಾಯಾಧೀಶರು, ತನಿಖೆಯ ಪ್ರಗತಿ ವಿವರ ಕೇಳಿದರು. `ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ~ ಎಂದು ತನಿಖಾಧಿಕಾರಿ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಅವರು, `ಯಾವ ದಾಖಲೆಗಳನ್ನು ಪರಿಶೀಲಿಸುತ್ತಿದ್ದೀರಿ? ನ್ಯಾಯಾಲಯ ನೀಡಿರುವ ದಾಖಲೆಗಳೋ? ನೀವು ಯಾವುದಾದರೂ ಪತ್ತೆಹಚ್ಚಿದ್ದೀರಾ?~ ಎಂದರು.