ಬಸವನಗುಡಿಯ ಸಾಕಮ್ಮ ಗಾರ್ಡನ್ನಲ್ಲಿರುವ ವೇದಾಂತ ಸತ್ಸಂಗ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿ.ಎನ್.ನಾಗರತ್ನ ಅವರು ಕೆ.ಜಿ. ಸುಬ್ರಾಯಶರ್ಮಾ ಅವರ `ಬಾಲರಾಮಾಯಣಂ~ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಸುಬ್ರಾಯಶರ್ಮಾ ಅವರು ವಾಲ್ಮೀಕಿ ರಾಮಾಯಣದಿಂದ 48 ಮುಖ್ಯವಾದ ಶ್ಲೋಕಗಳನ್ನು ಆಯ್ದು ಅದರ ತಾತ್ಪರ್ಯವನ್ನು ಸರಳವಾಗಿ ತಿಳಿಸಿದ್ದಾರೆ. ಉಷಾ ವೇಣುಗೋಪಾಲ್ ಕೃತಿ ಪರಿಚಯ ಮಾಡಿದರು. ಡಿ.ದಕ್ಷಿಣಾಮೂರ್ತಿ, ಸದಾನಂದಗಿರಿ ಸ್ವಾಮೀಜಿ, ಎಸ್.ರಾಜರಾಜೇಶ್ವರಿ ಶರ್ಮಾ, ಡಿ.ಶಾಮಣ್ಣ, ಮಂಜುನಾಥ್ ಮತ್ತಿತರು ಉಪಸ್ಥಿತರಿದ್ದರು.