ಕೊಲಂಬೊ (ಪಿಟಿಐ): ಭಾರತದ ಕ್ರಿಕೆಟಿಗರು 2010ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಐ.ಎಸ್.ಬಿಂದ್ರಾ ಮಾಡಿರುವ ಆರೋಪಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಲ್ಲಗಳೆದಿದೆ.
`ನಿಯಮ ಉಲ್ಲಂಘನೆಯ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಮೇಲೆ ಬಿಸಿಸಿಐ ಒತ್ತಡ ಹೇರಿ ಅದನ್ನು ತೆಗೆಸಿತ್ತು' ಎಂದೂ ಬಿಂದ್ರಾ ಆರೋಪಿಸಿದ್ದರು.
`ಈ ರೀತಿಯ ಪ್ರಕರಣವೇ ನಡೆದಿಲ್ಲ. ಯಾರಿಗೂ ವರದಿ ನೀಡಿಲ್ಲ. ಈಗ ಮಾಡಲಾಗಿುವ ಆರೋಪ ಸುಳ್ಳಿನ ಕಂತೆ' ಎಂದು ಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆ್ಯಷ್ಲೆ ಡಿ ಸಿಲ್ವಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ಬಿಂದ್ರಾ ಸೋಮವಾರ ಮತ್ತೊಮ್ಮೆ ನುಡಿದಿದ್ದಾರೆ.