ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ಗಳನ್ನು ಆರಂಭಿಸಲಿ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ವಿಜಯನಗರದ ಟಿ.ಟಿ.ಎಂ.ಸಿ.ಯಿಂದ ಹೊಸಕೋಟೆಯವರೆಗೆ ಬಿಎಂಟಿಸಿ ಕೆಂಪು ಬೋರ್ಡಿನ ಫಲಕದ ಬಸ್ಸುಗಳನ್ನು ಆರಂಭಿಸಬೇಕು.

ವಿಜಯನಗರ, ಚಂದ್ರಾ ಲೇಔಟ್‌ನಿಂದ ಮೆಜೆಸ್ಟಿಕ್‌ಗೆ ನೂರಾರು ಬಸ್‌ಗಳಿವೆ. ಆದರೆ, ವಿಜಯನಗರ, ಕೆಂಪೇಗೌಡ ಬಸ್ ನಿಲ್ದಾಣ, ರಿಚ್ಮಂಡ್ ಸರ್ಕಲ್, ಮೇಯೋಹಾಲ್, ಹಲಸೂರು, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ, ಟಿ.ಸಿ.ಪಾಳ್ಯ ಮಾರ್ಗವಾಗಿ ಹೊಸಕೋಟೆಯವರೆಗೆ ನೇರವಾಗಿ ಬಸ್‌ಗಳು ಚಲಿಸುತ್ತಿಲ್ಲ.

ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಈ ಮಾರ್ಗವಾಗಿ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಹಾಗಾಗಿ ತ್ವರಿತವಾಗಿ ವಿಜಯನಗರದಿಂದ ಹೊಸಕೋಟೆಯವರೆಗೂ ಬಿಎಂಟಿಸಿ ಬಸ್ಸುಗಳು ಸೇವೆ ಆರಂಭಿಸಿದರೆ ಪ್ರಯಾಣಿಕರಿಗೆ  ಅನುಕೂಲವಾಗಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT